News Karnataka Kannada
Friday, May 03 2024
ಚಿಕಮಗಳೂರು

ಬೀರೂರು ದೇವರಾಜ್ ಕಾಂಗ್ರೆಸ್ ಪಕ್ಷ ಸೇರ್ಪಡೆ

Birur Devaraj joins Congress
Photo Credit : News Kannada

ಬೀರೂರು: ಹಿರಿಯ ಮತ್ಸದಿ, ರಾಜಕೀಯ ಚತುರ ಹಾಗೂ ಜ್ಯಾತ್ಯಾತೀತ ಚಿಂತನೆಗಳನ್ನೊಳಗೊಂಡ ಅಪಾರ ಕಾರ್ಯಕರ್ತರನ್ನೊಂದಿರುವ ಬೀರೂರು ದೇವರಾಜ್ ಕಾಂಗ್ರೆಸ್ ಪಕ್ಷ ಸಿದ್ದಾಂತ ಒಪ್ಪಿ ಮರಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಕಡೂರು ವಿಧಾನಸಭಾ ಕ್ಷೇತ್ರ ಚುನಾವಣೆ ಗೆಲ್ಲಲು ಆನೆಬಲ ತಂದತಾಗಿದೆ ಎಂದು ಕಡೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಆನಂದ್ ಹೇಳಿದರು.

ಅವರು ಪಟ್ಟಣದ ರಾಜಾಜಿ ನಗರದಲ್ಲಿರುವ ಬೀರೂರು ದೇವರಾಜ್ ನಿವಾಸದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಪಕ್ಷದ ಧ್ವಜ ನೀಡಿ ಪಕ್ಷ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ೧೯೯೯ರ ಕಾಲಘಟ್ಟದ ಕಾಂಗ್ರೆಸ್ ಪ್ರಭಾವಿ ರಾಜಕಾರಣಿ ಗುಂಡುರಾವ್ ರಂತಹ ರಾಜಕಾರಣದ ಗರಡಿಯಲ್ಲಿ ಪಳಗಿದವರು. ಈ ಹಿಂದೆ ಬೀರೂರು ಕ್ಷೇತ್ರ ಇದ್ದಂತಹ ಸಂದರ್ಭದಲ್ಲಿ ಎಂ.ಎಲ್.ಎ ಚುನಾವಣೆಗಳನ್ನು ಎದುರಿಸಿರುವ ದೇವರಾಜಣ್ಣ ಜಿಲ್ಲೆಯಲ್ಲಿಯೇ ತನ್ನದೆ ಕಾರ್ಯಕರ್ತರ ದಂಡು ಹಾಗೂ ಅನೇಕ ಯುವ ರಾಜಕಾರಣಿಗಳ ಬೆಳವಣಿಗೆ ಸಹಕಾರ ನೀಡಿದ್ದಾರೆ.

ಕ್ಷೇತ್ರದಲ್ಲಿ ಅವರಿಗೆ ತನ್ನದೆ ಆದ ವರ್ಚಸ್ಸನ್ನು ಹೊಂದಿರುವ ಅವರ ಅಭಿಮಾನಿಗಳು ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಅಭೂತ ಪೂರ್ವ ಮತ ನೀಡಿ ನನ್ನನ್ನು ಗೆಲ್ಲಿಸುತ್ತಾರೆಂಬ ಅಚಲ ವಿಶ್ವಾಸವಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ರಾಜ್ಯಾದ್ಯಂತ ಅನ್ಯ ಪಕ್ಷಗಳ ಅನೇಕ ಮುಂಚೂಣಿ ನಾಯಕರು ಬಿಜೆಪಿಯ ನಡೆಗೆ ಬೇಸತ್ತು ಇಂದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಕಡೂರು ಕ್ಷೇತ್ರಕ್ಕೆ ನಮ್ಮ ನಾಯಕರುಗಳು ಉತ್ತಮ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ.

ಜನ ಸ್ನೇಹಿ ನಾಯಕರಾದ ಬೀರೂರು ದೇವರಾಜ್‌ರಂತಹ ನಾಯಕರ ಅವಶ್ಯಕತೆ ಪಕ್ಷಕ್ಕೆ ಇದೆ. ಅವರ ಅನುಭವ, ಸಂಘಟನೆ ಆನಂದ್ ಗೆಲುವಿಗೆ ದಾರಿದೀಪವಾಗುತ್ತದೆ. ಅವರನ್ನುಕಾಂಗ್ರೆಸ್ ಪಕ್ಷ ಒಂದು ಕುಟುಂಬದಲ್ಲಿ ಹಿರಿಯರನ್ನು ಹೇಗೆ ಗೌರವಿಸಬೇಕೋ ಹಾಗೆ ಗೌರವಿಸುತ್ತದೆ ಎಂದರು.

ಕಾಂಗ್ರೆಸ್‌ ಧ್ವಜ ಸ್ವೀಕರಿಸಿ ಪಕ್ಷ ಸೇರ್ಪಡೆಯಾದ ಬೀರೂರು ದೇವರಾಜ್‌ಮಾತನಾಡಿ, ನಾನು ಹುಟ್ಟಿದಾಗಿನಿಂದಲು ಶ್ರೀಮಂತನಾಗಿಯೇ ಹುಟ್ಟಿಲ್ಲ. ಬಡವರಂತೆ ದುಡಿದು ಅನೇಕರ ಸಹಕಾರದಿಂದ ಈ ಮಟ್ಟಕ್ಕೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದೇನೆ. ನಾನು ಮೂಲ ಕಾಂಗ್ರೆಸ್ಸಿಗ. ಕಾರಣಾಂತರಗಳಿಂದ ಚುನಾವಣೆ ಸಂದರ್ಭಗಳಲ್ಲಿ ನಾನು ಕೂಡ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗುವಂತ ಸಂದರ್ಭ ಈ ಕಾಂಗ್ರೆಸ್ ಮನೆ ಬಿಟ್ಟಿದೆ. ಆದರೆ ಕೊನೆಗೂ ತನ್ನ ತವರು ಮನೆಗೆ ಸ್ನೇಹಿತರು ಬರಮಾಡಿಕೊಂಡಿರುವುದು ಸಂತಸ ತಂದಿದೆ.

ಕಳೆದ ವಾರ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನನಗೆ ಕರೆ ಮಾಡಿ ನಾನು ನಿಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಹುಡುಗ ಆನಂದ್‌ರನ್ನು ಚುನಾವಣಾ ಕಣಕ್ಕೆ ಇಳಿಸಿದ್ದೇನೆ. ಅವರನ್ನು ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದ ಹಿನ್ನಲೆಯಲ್ಲಿ ಅವರ ಮಾತಿಗೆ ಬೆಲೆ ಕೊಟ್ಟು ಬಂದಿದ್ದೇನೆ.

೧೯ ವರ್ಷಗಳ ನಂತರ ನಮ್ಮ ತವರು ಮನೆಗೆ ಆಗಮಿಸಿದ್ದು, ನನ್ನ ಸ್ನೇಹಿತರು , ಅಭಿಮಾನಿಗಳು ಹಾಗೂ ಕಾರ್ಯಕರ್ತರ ಪಡೆ ಪ್ರೀತಿಗೆಲ್ಲುವ ಆನಂದ್‌ರನ್ನು ವಿಧಾನಸೌಧಕ್ಕೆ ಕಳುಹಿ ಸಲು ಅತಿಹೆಚ್ಚು ಶ್ರಮ ಪಟ್ಟುಗೆಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಡೂರು-ಬೀರೂರು ಬ್ಲಾಕ್‌ಅಧ್ಯಕ್ಷರಾದ ಚಂದ್ರಮೌಳಿ, ಕಲ್ಲೇಶ್, ಗ್ಯಾಸ್‌ಚಂದ್ರಪ್ಪ, ಭಂಡಾರಿ ಶ್ರೀನಿವಾಸ್, ಕೆ.ಎಲ್.ಹುಚ್ಚಪ್ಪ, ಶ್ರೀಕಂಠ ಒಡೆಯರ್, ಕಂಸಾಗರ ಸೋಮಶೇಖರ್, ಪುರಸಭೆ ಸದಸ್ಯ ಶಶಿಧರ್, ಜಿಯಾವುಲ್ಲಾ, ಶರತ್ ಕೃಷ್ಣಮೂರ್ತಿ, ಮೋಹನ್‌ಕುಮಾರ್, ಎಂ.ಆರ್.ಟಿ.ಸುರೇಶ್, ದಾಸಯ್ಯನಗುತ್ತಿಚಂದ್ರಪ್ಪ, ಶಂಕರ್, ರುದ್ರೇಗೌಡ, ಬಿ.ಟಿ.ಚಂದ್ರಶೇಖರ್, ಜಯಣ್ಣ, ವಿನೋದ್ ಸೇರಿದಂತೆ ನೂರಾರು ಕಾರ್ಯಕರ್ಯರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು