ಕುಂದಾಪುರ: ರಜೆಯ ವೇಳೆ ಸ್ನೇಹಿತರ ಜತೆಗೂಡಿ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೂಸಳ್ಳಿ ಜಲಪಾತಕ್ಕೆ ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಸ್.ಐ ಕುಮಾರ್ ಶೆಟ್ಟಿ ಎನ್ನುವರ ಮಗ ಚಿರಾಂತ್ ಶೆಟ್ಟಿ (20) ಆಕಸ್ಮಿಕವಾಗಿ ನೀರುಪಾಲಾಗಿರುವ ಘಟನೆ ನಡೆದಿದೆ.
ಬೈಂದೂರಿನಲ್ಲಿರುವ ಸ್ನೇಹಿತರ ಮನೆಗೆ ಬಂದಿದ್ದ ಚಿರಾಂತ್ ಶೆಟ್ಟಿ ತನ್ನ ಸ್ನೇಹಿತರ ಮನೆಯಲ್ಲಿ ಶುಕ್ರವಾರ ಊಟ ಮಾಡಿಕೊಂಡು ಮಧ್ಯಾಹ್ನ 3.30 ರ ಸುಮಾರಿಗೆ ಕೂಸಳ್ಳಿ ಜಲಪಾತಕ್ಕೆ ತೆರಳಿದ್ದರು. ಚಿರಾಂತ್ ಶೆಟ್ಟಿ ನೀರಿಗೆ ಇಳಿದು ಈಜಲು ಮುಂದಾದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆ ಆಗಿದ್ದಾರೆ. ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ. ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಚಿರಾಂತ್ ಶೆಟ್ಟಿ ಶವವಾಗಿ ಪತ್ತೆಯಾಗಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.