ಬೀದರ್: ನಗರದಲ್ಲಿ ಸಚಿವ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಖಾ ವಿರುದ್ದ ಬ್ಯಾಟಿಂಗ್ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಭಗವಂತ ಖೂಖಾ ಒಬ್ಬ ಸುಳ್ಳಿನ ಸರ್ದಾರ, ಸುಳ್ಳೆ ಹತ್ತು ಸಲ ಹೇಳಿದ್ದರೆ ಸತ್ಯ ಆಗುತ್ತೆ ಅಂತಾ ಖೂಬಾ ತಿಳಿದುಕೊಂಡಿದ್ದಾರೆ.ಸೋಲಿನ ಭೀತಿಯಿಂದ ಖೂಬಾ ನಮ್ಮ ಕುಟುಂಬದ ವಿರುದ್ದ ವೈಯಕ್ತಿಕ ಟೀಕೆ ಮಾಡೋದೆ ದೊಡ್ಡ ಸಾಧನೆ ಎಂದ ಸಚಿವ ಈಶ್ವರ ಖಂಡ್ರೆ ಟೀಕಿಸಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಸೋಲಿನ ಭೀತಿಯಿಂದ ಕೆಳಮಟ್ಟದ ರಾಜಕಾರಣ ಮಾಡ್ತಿದ್ದಾರೆ.ಭಗವಂತ್ ಖೂಬಾ ವಂಚಕ ಅಕ್ರಮ ಗಣಿಗಾರಿಕೆಯಲ್ಲಿ ಲೂಟಿ ಮಾಡಿದ ಕಳ್ಳ ಎಂದು ದಾಖಲೆ ಸಮೇತ ಟೀಕೆ ಮಾಡಿದ ಸಚಿವ ಈಶ್ವರ ಖಂಡ್ರೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದ ಸರ್ವೆ ಯಲ್ಲಿ ಅನುಮತಿ ಪಡೆದಿದ್ದು ಎರಡು ಎಕರೆ ಗಣಿಗಾರಿಕೆ ಮಾಡಿದ್ದು ಇನ್ನು ಎಂಟು ಎಕರೆಯಲ್ಲಿ ಅಕ್ರಮ ಸಾಬೀತಾದ ಹಿನ್ನಲೆ ಗಣಿಗಾರಿಕೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. 25 ಕೋಟಿ ರೂ. ವಂಚನೆ ಹಣ ಕಟ್ಟುವಂತೆ ಗಣಿಗಾರಿಕೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದ್ದಾರೆ. ಅಫಿಡವಿಟ್ ನಲ್ಲಿ ಈ ಬಗ್ಗೆ ಯಾವುದೆ ಮಾಹಿತಿ ನೀಡದೆ ಸತ್ಯವನ್ನ ಮುಚ್ಚಿಟ್ಟದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಮಾಡಿದ್ದಕ್ಕೆ ಬಿಜೆಪಿ ಸರ್ಕಾರವೇ ದಂಡ ಹಾಕಿತ್ತು 77 ಲಕ್ಷ ರೂ. ದಂಡವನ್ನು 54 ಲಕ್ಷ ರೂ. ದಂಡ ಹಾಕಿದ್ದಾರೆ ಅಂತಾ ಅಫಿಡವಿಟ್ ನಲ್ಲಿ ತೋರಿಸಿದ್ದಾರೆ. 2 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಅನುಮತಿ ಪಡೆದು ಎಂಟು ಏಕರೆಯಲ್ಲಿ ಗಣಿಗಾರಿ ಲೂಟಿ ಮಾಡಿದ ಕಳ್ಳ ಸಂಸದ ಭಗವಂತ ಖೂಬಾ ಅಲ್ಲದೆ,ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿ ಮಾಡಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.