News Karnataka Kannada
Monday, April 29 2024
ಉಡುಪಿ

ಉಡುಪಿ: ಮೃತಪಟ್ಟ ಮಹಿಳೆಯ ಮೃತದೇಹ ರಕ್ಷಿಸಿಡಲು ಮನೆಯಲ್ಲೇ ಸ್ಥಳಾವಕಾಶ ನೀಡಿದ ಸಮಾಜ ಸೇವಕ

Nithyananda, a social worker, has given space at his home to save the body of a dead woman.
Photo Credit : News Kannada

ಉಡುಪಿ: ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ದೂರದ ಸಂಬಂಧಿಕರು ಬರುವರೆಗೆ ಶವ ರಕ್ಷಿಸಿಡಲು ಸ್ಥಳಾವಕಾಶದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಮ್ಮ ಮನೆಯಲ್ಲಿಯೇ ಮೃತದೇಹ ರಕ್ಷಿಸಿಡಲು ಅವಕಾಶ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿಯ 42ವರ್ಷದ ಸ್ವಪ್ನ ಮೃತಪಟ್ಟ ಮಹಿಳೆ. ಇವರು, ಮೂಡುಬಿದಿರೆಯಲ್ಲಿ ನಡೆಯುತ್ತಿದ್ದ ಯಕ್ಷಗಾನದಲ್ಲಿ ಮಗಳ ಪಾತ್ರ ನೋಡಲೆಂದು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಶಿರ್ವ ಬಳಿ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಶಿರ್ವ ಪೋಲಿಸ್ ಠಾಣೆಯ ಎಸ್.ಐ ರಾಘವೇಂದ್ರ, ಎ.ಎಸ್.ಐ. ಕೃಷ್ಣ ಆಚಾರ್ಯ, ಎ.ಎಸ್.ಐ ಶ್ರೀಧರ ಆಚಾರ್ಯ, ಕಾನೂನು ಪ್ರಕ್ರಿಯೆ ನಡೆಸಿದರು. ಸಂಚಾರಿ ಪೋಲಿಸ್ ಠಾಣಾಧಿಕಾರಿ ಸಕ್ತಿವೇಲು ಸಹಕರಿಸಿದರು. ಮೃತರ ಸಂಬಂಧಿಕರು ಉಡುಪಿಯಲ್ಲಿ ಅಂತ್ಯಸಂಸ್ಕಾರ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು