ಕುಂದಾಪುರ: ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೋಷ ನಗರದಲ್ಲಿರುವ ಹಿಂದೂ ರುದ್ರಭೂಮಿ ಪಾಳು ಬಿದ್ದು ಹೋಗಿದ್ದು ಸಂಪೂರ್ಣ ದುರಾವಸ್ಥೆಯಲ್ಲಿದೆ. ರುದ್ರಭೂಮಿ ಮುಳ್ಳಿ ಪೋದೆಗಳಿಂದ ಆವೃತ್ತವಾಗಿದ್ದು ಶವಗಳ ಸಂಸ್ಕಾರವನ್ನು ಮಾಡುವುದೆ ಕಷ್ಟಕರವಾಗಿದೆ.
ಹೆಮ್ಮಾಡಿ ಸಂತೋಷ ನಗರದಲ್ಲಿರುವ ಹಿಂದೂ ರುದ್ರಭೂಮಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲ,ನೀರಿನ ಅನುಕೂಲತೆಗಳಿಲ್ಲ,ರಸ್ತೆ ಮತ್ತು ಸ್ಮಶಾಣದ ಸುತ್ತಲೂ ಮುಳ್ಳಿನ ಪೋದೆಗಳು ಬೆಳೆದು ನಿಂತಿದೆ,ಕಲ್ಲಿನ ಪಾಗಾರ ಬಿದ್ದು ಹೋಗಿದೆ ದುಸ್ಥಿಯಲ್ಲಿರುವ ರುದ್ರಭೂಮಿಯನ್ನು ಬಳಕೆ ಮಾಡಲು ಸಾಧ್ಯವಾಗದೆ ಗ್ರಾಮದ ಜನರು ಶವ ಸಂಸ್ಕಾರ ಮಾಡಲು ಕುಂದಾಪುರ ಸ್ಮಶಾನಕ್ಕೆ ಹೋಗ ಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ.
ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಗೊಳಿಸಬೇಕೆಂದು ಶ್ರೀ ಮುಕ್ತಿಧಾಮ ಹಿಂದೂ ರುದ್ರಭೂಮಿ ಸಂಘಟನೆ ಆಗ್ರಹಿಸಿದೆ.
ಸುಮಾರು 60 ಕ್ಕೂ ಅಧಿಕ ವರ್ಷಗಳಿಂದ ಹಿಂದೂ ಸಮುದಾಯದ ಬಾಂಧವರು ಉಪಯೋಗಿಸಿ ಕೊಂಡು ಬರುತ್ತಿರುವ ಹೆಮ್ಮಾಡಿ ಸಂತೋಷ ನಗರದ ಸರ್ವೆ ನಂಬರ್ 136/2 ರಲ್ಲಿ ಇರುವ ಹಿಂದೂ ರುದ್ರಭೂಮಿಗೆ 0.23 ಸೆಂಟ್ಸ್ ಜಾಗವನ್ನು ಕಾಯ್ದಿರಿಸಲಾಗಿದೆ.ರುದ್ರಭೂಮಿ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮ ಮಾಡಿಕೊಂಡಿದ್ದಾರೆ ಹಿಂದೂ ರುದ್ರಭೂಮಿಗೆ ಕಾಯ್ದಿರಿಸಿದ ಜಾಗವನ್ನು ಸರ್ವೆ ಮಾಡಿ ಗಡಿಗುರುತುಗಳನ್ನು ಮಾಡಿಕೋಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರುದ್ರಭೂಮಿ ಅಭಿವೃದ್ಧಿಗೊಂಡರೆ ಗ್ರಾಮದ ಜನರಿಗೆ ಅನುಕೂಲ: ಪ್ರಗತಿಯನ್ನು ಹೊಂದುತ್ತಿರುವ ಹೆಮ್ಮಾಡಿ ಗ್ರಾಮದಲ್ಲಿ ಏರುಗತ್ತಿಯಲ್ಲಿ ವಾಸ್ತವ್ಯದ ಮನೆಗಳು ನಿರ್ಮಾಣವಾಗುತ್ತಿದೆ ಜನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ.ಹೆಮ್ಮಾಡಿ ಗ್ರಾಮದಲ್ಲಿರುವ ಸ್ಮಶಾನವನ್ನು ಅಭಿವೃದ್ಧಿ ಪಡಿಸಿದರೆ ಹೆಮ್ಮಾಡಿ ಗ್ರಾಮ ಮಾತ್ರವಲ್ಲದೆ ಆಸುಪಾಸಿ ಊರುಗಳಾದ ಕಟ್ಟು,ತುಳಸಿ,ಹರೆಗೋಡು,ಕನ್ನಡ ಕುದ್ರು,ಕಟ್ ಬೇಲ್ತೂರು,ಜಾಲಾಡಿ,ಹೊಸ್ಕಳಿ ಸೇರಿದಂತೆ ಇನ್ನಿತರ ಗ್ರಾಮದ ಜನರಿಗೆ ಅನುಕೂಲವಾಗಲಿದೆ.