ಮಂಗಳೂರು: ನಗರದ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕಾವೂರು ವಾರ್ಡ್ 18 ವ್ಯಾಪ್ತಿಯ ಆಕಾಶಭವನ ಮುಖ್ಯ ರಸ್ತೆ ಕಾಂಕ್ರೀಟ್ ವಿಸ್ತರಣೆ ಕಾಮಗಾರಿ ಒಟ್ಟು 1 ಕೋಟಿ 46 ಲಕ್ಷ ರೂ ವೆಚ್ಚದಲ್ಲಿ ನಡೆಯಲಿದ್ದು, ಶಾಸಕರಾದ ಡಾ.ವೈ.ಭರತ್ ಶೆಟ್ಟಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್, ಮಂಡಲ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಗೊಡ್ವಿನ್ ಕ್ರಾಸ್ತಾ, ಕಾವೂರು ಮಹಾಶಕ್ತಿ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಮಂಡಲ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾದ ಸಂದೇಶ್ ಶೆಟ್ಟಿ, ಮಂಡಲ ಪ್ರಕೋಷ್ಟದ ಸಹ ಸಂಚಾಲಕರಾದ ಅಶ್ವಿನ್ ಅಮೀನ್, ಪ್ರಮುಖರಾದ ಜಗದೀಶ್ ಅಂಚನ್, ನಾರಾಯಣ ಶೆಟ್ಟಿ, ಅಚ್ಚುತ್ತ ಪೂಜಾರಿ, ನಾಗೇಶ್ ಕುಂದರ್, ಸುಕೇಶ್ ಕೋಟ್ಯಾನ್, ಸಂಜಯ್ ಪೂಜಾರಿ, ಪ್ರಶಾಂತ್ ಪೂಜಾರಿ ಸಂದೀಪ್ ಶೆಟ್ಟಿ, ಶೇಖರ್ ಶೆಟ್ಟಿ, ರಾಜೇಶ್, ಗಣೇಶ್ , ಲಕ್ಷಣ ನಾಯ್ಕ್, ಬೂತ್ ಅಧ್ಯಕ್ಷ ರಾದ ಸಚಿನ್ ಶೆಟ್ಟಿ, ಮೋಹನ್ ಕುಂದರ್, ಜಗದೀಶ್ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.