ಮಂಗಳೂರು: ಮಾರ್ಚ್.19 ರಂದು ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಹಾಗೂ ಬ್ರೆವೆರಾ ಟೆಕ್ನಾಲಜಿಸ್ ಲಿಮಿಟೆಡು, ಬಿಜೈ ಮಂಗಳೂರು ನ ಸಹಯೋಗದಲ್ಲಿ ವೈದ್ಯಕೀಯ ಮತ್ತು ದಂತ ಚಿಕಿತ್ಸ ಶಿಬಿರ, ದಂತ ಆರೋಗ್ಯ ಹಾಗೂ ತಂಬಾಕು ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ವಿಶ್ವ ಬಾಯಿಯ ಆರೋಗ್ಯ ದಿನದ ಅಂಗವಾಗಿ ನಡೆಸಲಾಯಿತು. ಶಿಬಿರದಲ್ಲಿ ಸುಮಾರು 70 ಜನರು ಪ್ರಯೋಜನವನ್ನು ಪಡೆದುಕೊಂಡರು.ಡಾ. ಅಪೂರ್ವ ಕೋಟ್ಯಾನ್, ಮಾಹಿತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶ್ರೀಯುತ ಅರವಿಂದ್ ಕಿಣಿ, ಫೆಷಿಲಿಟಿ ಅಧಿಕಾರಿ, ಶ್ರೀಯುತ. ದೇಸಮೊಂಡ್, ಡಿಸೋಜಾ, ಡಾ. ಸ್ನೇಹ, ಮೆಡಿಕಲ್ ಆಫೀಸರ್, ಶ್ರೀಯುತ ಭರತ್ ಕುಮಾರ್, ಶ್ರೀಮತಿ ಸ್ವೀಕ್ರಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.