ಪುತ್ತೂರು: ಮಹಾರಾಷ್ಟ್ರದಲ್ಲಿ ಉದ್ಭವ್ ಠಾಕ್ರೆ ಗೆ ಮಾಡಿದುಣ್ಣೋ ಮಹಾರಾಯ ಗಾಧೆ ಅನ್ವಯವಾಗುತ್ತದೆ 2019 ರಲ್ಲಿ ಬಿಜೆಪಿ-ಶಿವಸೇನೆ ಒಟ್ಟಾಗಿ ಚುನಾವಣೆಗೆ ಹೋಗಿತ್ತು ಆದರೆ ಅಧಿಕಾರದ ಆಸೆಯಿಂದ ಉದ್ಭವ್ ಠಾಕ್ರೆ ಅನೈತಿಕ ಸಂಬಂಧದ ಮೂಲಕ ಸರಕಾರ ರಚಿಸಿದ್ದಾರೆ, ಎಂದು ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು ಜನರ ತೀರ್ಪಿನ ವಿರುದ್ಧದ ಈ ಸರಕಾರ ಅಲ್ಪಾಯುಷಿ ಅನ್ನೋದು ತಿಳಿದಿತ್ತು ಈ ಕಾರಣಕ್ಕೆ ಇದೀಗ ಮಹಾರಾಷ್ಟ್ರ ಸರಕಾರಕ್ಕೆ ಈ ಗತಿ ಬಂದಿದೆ ಎಂದರು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪತ್ರಕರ್ತರ ಮೇಲೆ ನಡೆದ ಹಲ್ಲೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಈ ಸಂಬಂಧ ಪೋಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.