ಮಂಗಳೂರು: ರಾಜ್ಯ ಧಾರ್ಮಿಕ ಪರಿಷತ್ ಸಭೆ ನಡೆಸದೇ ನಿರ್ಲಕ್ಷ್ಯ ವಹಿಸಿರುವ ಸಮಿತಿ ಕಳೆದ ಡಿಸೆಂಬರ್ ಗೆ ಕೊನೆಯ ಸಭೆ ನಡೆದಿದ್ದು, ಮತ್ತೆ ಸಭೆ ನಡೆದಿಲ್ಲ ಪ್ರತೀ ತಿಂಗಳಿಗೊಮ್ಮೆ ರಾಜ್ಯ ಧಾರ್ಮಿಕ ಪರಿಷತ್ ಸಭೆ ನಡೆಸಬೇಕು, ರಾಜ್ಯದ ದೇವಸ್ಥಾನಗಳ ಸಮಸ್ಯೆ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್ ಕುಮಾರ್ ಕೆಎಸ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರೂ ಆಗಿರುವ ಮುಜರಾಯಿ ಸಚಿವರ ಕರ್ತವ್ಯ ಆದರೆ ಸಮಿತಿ ನಿಷ್ಕ್ರಿಯವಾಗಿದ್ದು, ಕುಕ್ಕೆ ಸೇರಿ ಹಲವು ದೇವಸ್ಥಾನಗಳ ಸಮಸ್ಯೆ ನೆನೆಗುದಿಗೆ ಕುಕ್ಕೆಯ ಪೂಜಾ ವಿಧಿಗಳ ವಿಚಾರದಲ್ಲಿ ಮನವಿ ಸಲ್ಲಿಸಿದ್ದರೂ ಸಮಿತಿ ಸಭೆಯೇ ನಡೆದಿಲ್ಲ. ಕುಕ್ಕೆಯಲ್ಲಿ ಮೂರು ಹೊತ್ತು ದೇವರಿಗೆ ಪೂಜೆ ಸಲ್ಲಿಸಲು ಪರಿಷತ್ ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಕುಕ್ಕೆಯಲ್ಲಿ ದಿಟ್ಟ ವಿರುದ್ದವಾಗಿ ವೈಷ್ಣವ ಪದ್ದತಿಯಲ್ಲಿ ಪೂಜೆ ಸಲ್ಲಿಸುವ ಅರ್ಚಕರ ವಿರುದ್ದ ಕ್ರಮ ಆಗಿಲ್ಲ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಮನವಿ ಕೊಟ್ಟರೂ ಧಾರ್ಮಿಕ ಪರಿಷತ್ ಸಭೆ ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಹೇಶ್ ಕುಮಾರ್ ಹೇಳಿದ್ದಾರೆ.