News Karnataka Kannada
Monday, April 29 2024
ಮಂಗಳೂರು

ಮಂಗಳೂರು: ರಾಜ್ಯ ಸರಕಾರ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದೆ

state government is targeting minorities.
Photo Credit :

ಮಂಗಳೂರು:  ರಾಜ್ಯ ಸರಕಾರ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ವ್ಯಾಪಾರ ನಿರ್ಬಂಧ, ಹಲಾಲ್ ದಂಗಲ್ ಹೆಸರಲ್ಲಿ ಮುಸ್ಲಿಮರ ಬಗ್ಗೆ ತಾರತಮ್ಯ ಮಾಡುತ್ತಿದ್ದು ವಕ್ಫ್ ಆಸ್ತಿ ಬಗ್ಗೆ ವರದಿ ನೀಡಿರುವುದನ್ನು ನಿರ್ಲಕ್ಷಿಸಿದ್ದು ಮುಸ್ಲಿಮರಿಗೆ ಅವಮಾನಿಸಿದಂತೆ ಎಂದು, ರಾಜ್ಯ ಬಿಜೆಪಿ ಜಂಟಿ ವಕ್ತಾರ, ಮೈನಾರಿಟಿ ಕಮಿಷನ್ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದು ರಾಜ್ಯದಲ್ಲಿ ಅನುಷ್ಠಾನ ಆಗುತ್ತಿಲ್ಲ, ಸಂವಿಧಾನದಡಿ ಮುಸ್ಲಿಮರ ಹಕ್ಕುಗಳನ್ನು ಉಲ್ಲಂಘಿಸಿ, ಅಗೌರವ ನೀಡುತ್ತಿರುವುದು ಸಹಿಸಲ್ಲ. ಮುಸ್ಲಿಂ ಹಕ್ಕುಗಳ ಪರವಾಗಿ ರಾಜ್ಯ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂದಕ್ಕೆ ನೀಡುತ್ತೇನೆ ಎಂದರು.

ನನಗೆ ನೀಡಿರುವ ಗನ್ ಮೇನ್, ಮೈನಾರಿಟಿ ಕಮಿಷನ್ ಮಾಜಿ ಅಧ್ಯಕ್ಷನ ಸವಲತ್ತು ಹಿಂದಕ್ಕೆ ನೀಡುತ್ತೇನೆ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನ ವಹಿಸಲು ವಿಜಯೇಂದ್ರ ಡೀಲಿಂಗ್ ಮಾಡಲು ಬಂದಿದ್ದರು, ನಿಮಗೆಷ್ಟು ಕೋಟಿ ಬೇಕು ಎಂದು ಕೇಳಿ ವ್ಯವಹಾರ ಮಾಡಲು ಬಂದಿದ್ದರು. ನಾನು ಭ್ರಷ್ಟಾಚಾರಕ್ಕೆ ತಲೆಬಾಗಿಲ್ಲ, ಅಲ್ಪಸಂಖ್ಯಾತರ ಪರ ನಿಂತು ವರದಿ ಜಾರಿಗೆ ಆಗ್ರಹಿಸುತ್ತೇನೆ ನನ್ನ ವರದಿ ತಪ್ಪಾಗಿದ್ದಲ್ಲಿ ನನ್ನ ತಲೆ ಕಡಿಯಿರಿ ಎಂದು ಹೇಳಿದರು.

ಹೈಕೋರ್ಟ್ ಹೇಳಿದರೂ, ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ಸರಕಾರ ವರದಿ ಜಾರಿ ಮಾಡುತ್ತಿಲ್ಲ ನಾನು ಜೀವ ಇರೋವರೆಗೂ ಸತ್ಯ ಹೇಳುತ್ತೇನೆ, ಪಕ್ಷದಿಂದ ಹೊರಗೆ ಹಾಕಿದ್ರೆ ಹಾಕಲಿ ಪಕ್ಷದಲ್ಲಿದ್ದೇ ಅನ್ಯಾಯ ಪ್ರಶ್ನಿಸುತ್ತೇನೆ, ಅಲ್ಪಸಂಖ್ಯಾತರ ಪರ ಹೋರಾಡುತ್ತೇನೆ ಜನರನ್ನು ದಿಕ್ಕು ತಪ್ಪಿಸಿ ಕೋಮು ಗಲಭೆ ಎಬ್ಬಿಸಲು ಕಾರಣರಾಗಬೇಡಿ. ಬಪ್ಪನಾಡಿನಲ್ಲಿ ಎಲ್ಲರೂ ಜೊತೆಯಾಗಿದ್ದರು, ವ್ಯಾಪಾರಸ್ಥರ ಒಗ್ಗಟ್ಟು ಒಡೆದು ಹಾಕಿದ್ರು. ಯಡಿಯೂರಪ್ಪ, ಈಗಿನ ಸಿಎಂ ಬೊಮ್ಮಾಯಿ ಕೂಡ ಅಲ್ಪಸಂಖ್ಯಾತ ವಿರೋಧಿ ಎಂದು ಕಿಡಿಕಾರಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು