ಬಂಟ್ವಾಳ: ಸ್ಕೂಟರ್ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜೂ.೨೬ರಂದು ಸಂಭವಿಸಿದೆ.
ಪುಂಜಾಲಕಟ್ಟೆ ಸಮೀಪದ ಗಂಪದಡ್ಡ ಎಂಬಲ್ಲಿಯ ಹಂಝ ಅವರ ಪುತ್ರ ನವಾಝ್(೨೪) ಮೃತಪಟ್ಟವರಾಗಿದ್ದಾರೆ.
ಜೂ.೨೪ರಂದು ರಾತ್ರಿ ೧೦.೪೫ರ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಂತ್ಯಾರುನಲ್ಲಿ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಕೆಳಗಿನಬೆಟ್ಟು ಮನೆ ನಿವಾಸಿ ರಾಜೇಶ್ ಎಂಬವರು ಸ್ಕೂಟರ್ನಲ್ಲಿ ತನ್ನ ತಂದೆಯೊಡನೆ ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ನವಾಝ್ನ ಸ್ಕೂಟರ್ ಡಿಕ್ಕಿಯಾಗಿತ್ತು.
ಅಪಘಾತದಲ್ಲಿ ರಾಜೇಶ್ ಹಾಗೂ ಅವರ ತಂದೆ ಗಾಯಗೊಂಡು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಗಾಯಗೊಂಡ ನವಾಝ್ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವಾಝ್ ಮೃತಪಟ್ಟಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.