News Karnataka Kannada
Saturday, May 11 2024
ಮಂಗಳೂರು

ಬಂಟ್ವಾಳ: ರಸ್ತೆ ಬದಿಯಲ್ಲಿಯೇ ಮಹಿಳೆಗೆ ಚೂರಿಯಿಂದ ಇರಿದು ಕೊಲೆಗೈದ ಯುವಕ

Man stabs woman to death on roadside
Photo Credit : By Author

ಬಂಟ್ವಾಳ: ಯುವಕನೋರ್ವ ಮಹಿಳೆಯೋರ್ವರಿಗೆ ರಸ್ತೆ ಬದಿಯಲ್ಲಿಯೇ ಚೂರಿಯಿಂದ ಇರಿದು ಕೊಲೆಗೈದ ಘಟನೆ ನೆಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆ ಜಂಕ್ಷನ್ ನಲ್ಲಿ ಸೋಮವಾರ ನಡೆದಿದೆ.

ಅನಂತಾಡಿ ದೇವಿನಗರ ನಿವಾಸಿ ಸಂಜೀವ ರವರ ಪತ್ನಿ ಶಕುಂತಲಾ(೩೫ ವ.) ರವರು ಮೃತಪಟ್ಟ ಮಹಿಳೆ.

ಘಟನೆ ವಿವರ: ಅನಂತಾಡಿ ದೇವಿನಗರ ನಿವಾಸಿಯಾಗಿರುವ ಶಕುಂತಳಾ ಅವರು, ಪುತ್ತೂರಿನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು ಇಂದು ಅಪರಾಹ್ನ ತನ್ನ ದ್ವಿಚಕ್ರ ವಾಹನದಲ್ಲಿ ಪುತ್ತೂರಿಗೆ ತೆರಳುವ ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ. ಕೃತ್ಯವೆಸಗಿದ ಆರೋಪಿಯನ್ನು ಪುತ್ತೂರು ನಿವಾಸಿ ರಿಕ್ಷಾ ಚಾಲಕ ಶ್ರೀಧರ ಎಂದು‌ ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಿಕ್ಷಾದಲ್ಲಿ ಬಂದ‌ ಶ್ರೀಧರ ಮಹಿಳೆಯ ಬಳಿ ಕೆಲ ನಿಮಿಷ ಮಾತುಕತೆ ನಡೆಸಿದ್ದು, ಮಾತಿನ ಚಕಮಕಿ ತೀವ್ರಗೊಂಡು ಶ್ರೀಧರ ಚೂರಿಯಿಂದ ಶಕುಂತಳಾಗೆ  ತಿವಿದು , ಪುತ್ತೂರು ಕಡೆಗೆ ಪರಾರಿಯಾಗಿದ್ದ. ಇದೇ ವೇಳೆ ಘಟನೆಯನ್ನು ಕಂಡ ಖಾಸಗಿ ಬಸ್ ನ‌ ಚಾಲಕ. ತನ್ನ ಮೊಬೈಲ್ ನಲ್ಲಿ ರಿಕ್ಷಾವನ್ನು ಚಿತ್ರೀಕರಿಸಿ ಪೊಲೀಸರಿಗೆ ಒಪ್ಪಿಸಿದ್ದಾನೆ. ಈತನ್ಮಧ್ಯೆ ಗಂಭೀರ ಗಾಯಗೊಂಡ ಶಕುಂತಳಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಈ ಹಿ‌ಂದೆಯೂ ಶ್ರೀಧರ ‌ಶಕುಂತಳಾ ಗೆ ಬೆದರಿಕೆ‌ ಒಡ್ಡಿದ್ದ ಕುರಿತಾಗಿ ವಿಟ್ಲ ಠಾಣೆಗೆ ದೂರು‌ನೀಡಿದ್ದರು, ಪೊಲೀಸರು ಶ್ರೀಧರಗೆ ಎಚ್ಚರಿಕೆ ನೀಡಿದ್ದರು. ಇದೀಗ ಅದೇ ದ್ವೇಷದಿಂದ ಕೊಲೆ ನಡೆಸಿದ್ದಾನೆ ಎಂದು ಮೃತ ಶಕುಂತಳಾ ರ ಪತಿ ಸಂಜೀವ ವಿಟ್ಲ‌ಠಾಣೆಗೆ ದೂರು‌ ನೀಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಪರಿಶೀಲನೆ ನಡೆಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು