ಬೆಳ್ತಂಗಡಿ: ಬಿ.ಸಿ ರೋಡ್ ಪುಂಜಾಲಕಟ್ಟೆ ಹೆದ್ದಾರಿ ಬಂಟ್ವಾಳ ಸಮೀಪದ ಚಂಡ್ತಿಮಾರ್ ಬಳಿ ಜೂ.1 ರಂದು ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಘಟನೆಯಲ್ಲಿ ಮಡಂತ್ಯಾರಿನ ಕೀರ್ತಿ ಕ್ಯಾಟರಿಂಗ್ ಮಾಲಕ ರೋಶನ್ ಸೆರಾವೊ(43) ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.
ಇವರು ಜೂ.2 ರಂದು ನಡೆಯಲಿರುವ ಒಂದು ಸಮಾರಂಭಕ್ಕೆ ಕ್ಯಾಟರಿಂಗ್ ಇದ್ದ ಸಲುವಾಗಿ ಮಂಗಳೂರಿಗೆ ಮೀನು ಖರೀದಿ ಮಾಡಿ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ.
ಹಲವು ವರ್ಷಗಳಿಂದ ಕೀರ್ತಿ ಕ್ಯಾಟರಿಂಗ್ ಅನ್ನು ನಿರ್ವಹಿಸಿಕೊಂಡು ಬಂದಿದ್ದರು. ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಅಮಿತ, ಇಬ್ಬರು ಮಕ್ಕಳಾದ ಕೀರ್ತಿ, ಕೀರ್ತನ ಅಗಲಿದ್ದಾರೆ.