ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಸರ್ಕಾರವನ್ನು ಆಗ್ರಹಿಸಿ ಹೊರಗುತ್ತಿಗೆ ನೌಕರರ ಸಂಘದಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಮೂರನೇ ದಿನವಾದ ಬುಧವಾರ ಕಸವಿಲೇವಾರ ಸ್ಥಗಿತಗೊಂಡಿತ್ತು.
ಕುದ್ರೋಳಿ, ಮಾರುಕಟ್ಟೆ, ಬಂದರು, ಪ್ರದೇಶಗಳಲ್ಲಿ ಕಸವಿಲೇವಾರಿ ಸ್ಥಗಿತಗೊಂಡಿದ್ದು, ರಸ್ತೆ ಬದಿ ಕಸದ ರಾಶಿ ಇದೆ. ಆದರೆ ಶುಕ್ರವಾರ ಒಣಕಸವಿಲೇವಾರಿ ನಡೆಯಲಿದೆ. ಹಲವು ದಿನಗಳ ಕಾಲ ಹಸಿಕಸವಿಲೇವಾರಿ ಸ್ಥಗಿತಗೊಳ್ಳುವ ಕಾರಣ ಸಮಸ್ಯೆ ಬಿಗಾಡಿಯಿಸು ಸಾಧ್ಯತೆ ಇದೆ. ಪಾಲಿಕೆ ಒಳಚರಂಡಿ ಕಾರ್ಮಿಕರು, ಎಸ್ಟಿಪಿ ಆಪರೇಟರ್ಗಳು ಪ್ರತಿಭಟನೆಯಲ್ಲಿ ಭಾಗವಹಿಸಿರುವುದರಿಂದ ಒಳಚರಂಡಿ ಸಮಸ್ಯೆಯೂ ಬಿಗಡಾಯಿಸಿದೆ.