ಮಂಗಳೂರು: ಬೆಳಗಾವಿ ಪುಂಡಾಟಿಕೆಯನ್ನ ನಿಲ್ಲಿಸಲು ಕರ್ನಾಟಕ ರಾಜ್ಯ ಬಿಜೆಪಿ ಸರಕಾರವು ದಿಟ್ಟವಾದ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ಆತಂಕ ಸೃಷ್ಟಿಗೆ ಕಾರಣವಾಗಿದೆ .ಮಾತ್ರವಲ್ಲದೆ ಅದು ಕನ್ನಡಿಗರಿಗೆ ಮಾಡುವ ದ್ರೋಹವಾಗಿದೆ ಎಂದು ವಿಪಕ್ಷ ನಾಯಕ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದವರು ಅಲ್ಲಿ ಕಿಡಿಗೇಡಿಗಳು ಕರ್ನಾಟಕದ ವಾಹನಗಳಿಗೆ ಕಲ್ಲು ಎಸೆಯುವುದು ವಾಹನಗಳಿಗೆ ಹಾನಿ ಮಾಡುವುದಕ್ಕೆ ಸಂಬಂಧಿಸಿದ ಬಿಜೆಪಿ ಮುಖ್ಯಮಂತ್ರಿಗಳು ಒಂದು ಹೇಳಿಕೆ ನೀಡಿಲ್ಲ , ಜನರಿಗೆ ಕಷ್ಟ ಬರುವಾಗ ಡಬಲ್ ಇಂಜಿನ್ ಸರಕಾರ ಬಂದ್ ಆಗುತ್ತದೆಯೇ ಎಂದು ವ್ಯಂಗ್ಯ ಮಾಡಿದರು.
ಕೇಂದ್ರ ಸರಕಾರ ಮಹಾರಾಷ್ಟ್ರಕ್ಕೆ ಸರಕಾರಕ್ಕೆ ಏಕೆ ಎಚ್ಚರಿಕೆ ನೀಡುವುದಿಲ್ಲ ಮಹಾಜನ್ ವರದಿಯನ್ನು ಕೇಂದ್ರ ಸರ್ಕಾರ ಏಕೆ ಮುಚ್ಚಿಟ್ಟಿದೆ ಎಂದು ಪ್ರಶ್ನಿಸಿದರು . ಬಿಜೆಪಿಯ ಕೇಂದ್ರದ ಮತ್ತು ರಾಜ್ಯದ ಸರಕಾರ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತಿದೆಯೇ ಎಂದು ಪ್ರಶ್ನಿಸಿದರು.