ಮಂಗಳೂರು: ಶಿವದೂತೆ ಗುಳಿಗೆ ನಾಟಕ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ಭಾಷಣ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ತುಳುವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾ.14ರಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಶಿವದೂತೆ ಗುಳಿಗೆ ನಾಟಕ ಆಯೋಜಿಸಿದ್ದು, ನಾಟಕ ಪ್ರದರ್ಶನ ಕುರಿತು ಎಲ್ಲೆಡೆ ಪೋಸ್ಟರ್ ಅಂಟಿಸಲಾಗಿತ್ತು. ಈ ಬಗ್ಗೆ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಕಾಂಗ್ರೆಸ್ ನ್ನು ನಂಬಬೇಡಿ ಎಂದಿದ್ದಲ್ಲದೆ. ಗುಳಿಗೆ ಎಂದು ಜಾಪಾನ್ ಮಾತ್ರೆ ನೀಡಿ ಜನರಿಗೆ ವಂಚಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಹಲವು ತುಳುವರು ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಳಿಗೆ ತೂವೊನಡ್. pic.twitter.com/y6z6s7zBtn
— Mahi Mulki (@Mahimulki) March 15, 2023
ಮಹಿ ಮೂಲ್ಕಿ ಎಂಬ ಟ್ವೀಟ್ ಬಳಕೆದಾರ ಸಚಿವರ ಭಾಷಣವನ್ನು ಹಂಚಿಕೊಂಡಿದ್ದು, ಸಚಿವರ ಭಾಷಣದ ಕುರಿತು ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ಹೊರ ಊರೇನು ಅಲ್ಲ. ತುಳುನಾಡಿಗೆ ತಾಗಿಕೊಂಡಿರುವ ಊರು. ತುಳುನಾಡಿನ ಮೂಲ ನಿವಾಸಿಗಳಾದ ಆದಿದ್ರಾವಿಡರು, ಮುಂಡಾಲರು ಸೇರಿದಂತೆ ವಿವಿಧ ಮೂಲನಿವಾಸಿಗಳು ಕೆಲಸವನ್ನು ಆಶ್ರಯಿಸಿ ಅಲ್ಲಿಯೇ ನೆಲೆಯಾಗಿದ್ದಾರೆ. ತಮ್ಮೊಂದಿಗೆ ತಾವು ನಂಬಿರುವ ದೈವಗಳನ್ನು ಅಲ್ಲಿ ನಂಬುತ್ತಿದ್ದಾರೆ. ಗುಳಿಗ ದೈವ ಘಟ್ಟದಲ್ಲಿಯೂ ಇದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದೈವೊರ್ದು ಮಲ್ಲ ಏರ್ಲಾ ಇಜ್ಜಿ ತುಳುನಾಡ್ ಡ್. ಯಾನ್ ಪನಿಲೆಕ್ಕ ದೈವ ಕೇನುಂಡು, ಯಾನ್ ಪಂಡ ದೈವ ಪನಿಲೆಕ್ಕ ಪನ್ದ್ ಏರ್ ಬಲಿ ಬರ್ಪೆರಾ ಅಕುಲು ಪೂರಾ ಪನವು ಮಲ್ಪರೆ ಪಿದಡಿನಕುಲು. ದೈವೊಲೆನ ಪುದರ್ ಪನರೆಲಾ ಪೋಡ್ಯೊಂದಿತ್ತಿನ ಕಾಲ ಒಂಜಿತ್ತ್ಂಡ್. ಇತ್ತೆ ಮಾತೆರ್ನ ಸ್ಟೇಟಸ್ ಡ್ಲಾ ದೈವ, ಡಿಪಿಡ್ಲಾ ದೈವ, ರೀಲ್ಸ್ ಡ್ಲಾ ದೈವ. ತುಳುವೆರ್ ಸೀದೊಡು… https://t.co/sxN1Mkpzmz
— Mahi Mulki (@Mahimulki) March 16, 2023