News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ತುಳು ನಾಟಕಕ್ಕೆ ಗೃಹಸಚಿವ ಅವಮಾನ- ಆಕ್ರೋಶ

Home Minister insults Tulu drama
Photo Credit : Facebook

ಮಂಗಳೂರು: ಶಿವದೂತೆ ಗುಳಿಗೆ ನಾಟಕ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ಭಾಷಣ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ತುಳುವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾ.14ರಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಶಿವದೂತೆ ಗುಳಿಗೆ ನಾಟಕ ಆಯೋಜಿಸಿದ್ದು, ನಾಟಕ ಪ್ರದರ್ಶನ ಕುರಿತು ಎಲ್ಲೆಡೆ ಪೋಸ್ಟರ್‌ ಅಂಟಿಸಲಾಗಿತ್ತು. ಈ ಬಗ್ಗೆ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಕಾಂಗ್ರೆಸ್‌ ನ್ನು ನಂಬಬೇಡಿ ಎಂದಿದ್ದಲ್ಲದೆ. ಗುಳಿಗೆ ಎಂದು ಜಾಪಾನ್‌ ಮಾತ್ರೆ ನೀಡಿ ಜನರಿಗೆ ವಂಚಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಹಲವು ತುಳುವರು‌ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿ ಮೂಲ್ಕಿ ಎಂಬ ಟ್ವೀಟ್‌ ಬಳಕೆದಾರ ಸಚಿವರ ಭಾಷಣವನ್ನು ಹಂಚಿಕೊಂಡಿದ್ದು, ಸಚಿವರ ಭಾಷಣದ ಕುರಿತು ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ಹೊರ ಊರೇನು ಅಲ್ಲ. ತುಳುನಾಡಿಗೆ ತಾಗಿಕೊಂಡಿರುವ ಊರು. ತುಳುನಾಡಿನ ಮೂಲ ನಿವಾಸಿಗಳಾದ ಆದಿದ್ರಾವಿಡರು, ಮುಂಡಾಲರು ಸೇರಿದಂತೆ ವಿವಿಧ ಮೂಲನಿವಾಸಿಗಳು ಕೆಲಸವನ್ನು ಆಶ್ರಯಿಸಿ ಅಲ್ಲಿಯೇ ನೆಲೆಯಾಗಿದ್ದಾರೆ. ತಮ್ಮೊಂದಿಗೆ ತಾವು ನಂಬಿರುವ ದೈವಗಳನ್ನು ಅಲ್ಲಿ ನಂಬುತ್ತಿದ್ದಾರೆ. ಗುಳಿಗ ದೈವ ಘಟ್ಟದಲ್ಲಿಯೂ ಇದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು