ಮಂಗಳೂರು: ಭಾರತದ ಪ್ರಮುಖ ಐಟಿ ಕೇಂದ್ರವಾಗಿ ಬೆಳೆಯುವ ತಮ್ಮ ಮಂಗಳೂರಿನ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಎಂಬಂತೆ ನಗರದಲ್ಲಿ ಹುಟ್ಟಿ ಬೆಳೆದ ಐಟಿ ಇನ್ವೆಂಜರ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನವೆಂಬರ್ 17 2022 ರಂದು ಬೆಂಗಳೂರು ಅರಮನೆಯಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಆಯೋಜಿಸಿದ್ದ ಮೂರು ದಿನಗಳ ಐಟಿ ಪ್ರೈಡ್ ಆಫ್ ಕರ್ನಾಟಕ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎರಡು ಉನ್ನತ ಪ್ರಶಸ್ತಿಗಳನ್ನು ಗೆದ್ದಿದೆ.
ಇನ್ವೆಂಜರ್ ಟೆಕ್ನಾಲಜೀಸ್ 5 ಕೋಟಿ ರೂಗಳಿಂದ ಗರಿಷ್ಠ ನೂರು ಕೋಟಿವರೆಗಿನ ರಫ್ತಿನಲ್ಲಿ ಅತ್ಯುತ್ತಮ ಬೆಳವಣಿಗೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ ಮತ್ತು ಕಂಪನಿಯ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕರಾದ ಕೆ ವಿಜಯ ಪೈ ಅವರು ಐಟಿ ವಲಯದಲ್ಲಿ ವರ್ಷದ ಮಹಿಳಾ ಉದ್ಯಮಿ ಎಂದು ಗುರುತಿಸಲ್ಪಟ್ಟಿದ್ದಾರೆ.
ಇನ್ವೆಂಜರ್ ಟೆಕ್ನಾಲಜೀಸ್ ನ ವ್ಯವಸ್ಥಾಪಕ ನಿರ್ದೇಶಕ ಕೆ ಸತ್ಯೇಂದ್ರಪಾಯಿ ಮತ್ತು ಅವರ ಪತ್ನಿ ಸಾಧನ ಸತ್ಯೇಂದ್ರ ಪೈ ಅವರು ಕಂಪನಿಯ ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಮತ್ತು ರಾಜ್ಯದ ಐಟಿಬಿಟಿ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರಿಂದ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಸ್ಟಿಪಿಐ ನ ಅರವಿಂದ್ ಕುಮಾರ್, ಶೈಲೇಂದ್ರ ತ್ಯಾಗಿ, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇವಿ ರಮಣ ರೆಡ್ಡಿ, ಇಲಾಖೆ ನಿರ್ದೇಶಕಿ ಮೀನಾ ನಾಗರಾಜ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇನ್ವೆಂಜರ್ ಟೆಕ್ನಾಲಜೀಸ್ ನ ಸಿಎಫ್ಒ ಪ್ರಸನ್ನ ಶೆಣೈ, ಸಿಟಿಒ ರಾಮರಾಜ್, ಡೆವಲಪ್ಮೆಂಟ್ ಹೆಡ್ ಮ್ಯಾನೇಜರ್ ಗುರು ಪ್ರಸಾದ್, ಅಣ್ಣಪ್ಪ ಪೂಜಾರಿ, ಗಿರೀಶ್ ಕುಮಾರ್, ಶಿವಕುಮಾರ್, ಸೀಮಾ ರೈ, ಕರಣ್ ಕುಮಾರ್ ಉಪಸ್ಥಿತರಿದ್ದರು. ಕಳೆದ 16 ವರ್ಷಗಳಿಂದ ಮಂಗಳೂರು, ಬೆಂಗಳೂರು ಮತ್ತು ಅಮೇರಿಕಾದಲ್ಲಿ ಕಾರ್ಯನಿರ್ವಹಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿರುವ ಇನ್ವೆಂಜರ್ ಟೆಕ್ನಾಲಜೀಸ್ಗೆ ಈ ಪ್ರತಿಷ್ಠಿತ ಪ್ರಶಸ್ತಿಗಳು ಅತ್ಯಮೂಲ್ಯವಾದ ಮನ್ನಣೆಯಾಗಿದೆ ಎಂದು ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.