ಸುರತ್ಕಲ್: ರಂಗ ಸುದರ್ಶನ (ರಿ ) ಸಸಿಹಿತ್ಲು ಇವರ ಆಶ್ರಯದಲ್ಲಿ ಕಿನ್ನಿಗೋಳಿಯ ಉಲ್ಲಂಜೆ ಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ 1/09/2022 ನೇ ಗುರುವಾರ ರಾತ್ರಿ 9 ಗಂಟೆಗೆ ‘ಬಾಲೆಗ್ ಒಲಿಯಿನ ಭ್ರಾಮರಿ’ ಮುಗ್ಧ ಬಾಲಕಿಯ ಭಕ್ತಿಗೆ ಕಟೀಲು ದುರ್ಗೆ ಒಲಿದ ಕಥಾನಕ ಎಂಬ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಪರಮಾನಂದ ವಿ ಸಾಲ್ಯಾನ್ ಈ ನಾಟಕವನ್ನು ರಚಿಸಿ ನಿರ್ದೇಶನ ಮಾಡಿದ್ದು, ಎ ಪುಷ್ಪರಾಜ್ ತಂಡದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.