ಮಂಗಳೂರು: ಬಿಗ್ಬಾಸ್ ಸೀಸನ್ 9 ವಿನ್ನರ್ ಸ್ಥಾನ ಮುಡಿಗೇರಿಸಿಕೊಂಡಿರುವ ತುಳುನಾಡಿನ ರೂಪೇಶ್ ಶೆಟ್ಟಿ ಫುಲ್ ಬ್ಯುಸಿ ಆಗಿದ್ದಾರೆ. ರಿಯಾಲಿಟಿ ಶೋ ಬಿಗ್ ಬಾಸ್ ಪಟ್ಟ ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದರು.
ಅವರಿಗೆ ಕುಡ್ಲ ಜನರು ಭರ್ಜರಿಯಾಗಿ ಸ್ವಾಗತ ನೀಡಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಟ ಹಾಗೂ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅವರಿಗೆ ಭವ್ಯ ಸ್ವಾಗತದ ಜತೆಗೆ ವಿಜಯ ಯಾತ್ರೆ ನಡೆಸಲಾಯಿತು. ಮಂಗಳೂರಿನ ನೆಹರು ಮೈದಾನದಿಂದ ಆರಂಭಗೊಂಡ ವಿಜಯ ಯಾತ್ರೆ ಕುತ್ತಾರು ಕೊರಗಜ್ಜನ ದೈವಸ್ಥಾನಕ್ಕೆ ಸಾಗಿತು.