ಬೆಳಗಾವಿ: ಶ್ರೀರಾಮಸೇನೆಯ ಬೆಳಗಾವಿ ಅಧ್ಯಕ್ಷ ರವಿ ಕೋಕಿಟ್ಕರ್ ಅವರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿಜಿತ್ ಭಟ್ಖಂಡೆ, ರಾಹುಲ್ ಕೊಡಚವಾಡ ಮತ್ತು ಜ್ಯೋತಿಬಾ ಮುಟಗೇಕರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.
ಅಭಿಜಿತ್ ಪರವಾನಗಿ ಇಲ್ಲದ ಬಂದೂಕನ್ನು ಬಳಸಿ ಒಂದು ಸುತ್ತು ಗುಂಡು ಹಾರಿಸಿದ್ದನು. ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.
ಜನವರಿ ೭ ರ ಶನಿವಾರ ರಾತ್ರಿ ಹಿಂಡಲ್ಗಾ ಗ್ರಾಮದಲ್ಲಿ ಕೋಕಿಟ್ಕರ್ ಮತ್ತು ಅವರ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಗೆ ಮೂವರು ವ್ಯಕ್ತಿಗಳು ಗುಂಡು ಹಾರಿಸಿದ ನಂತರ ಗಾಯಗೊಂಡಿದ್ದರು.