News Karnataka Kannada
Saturday, May 04 2024
ಮಂಗಳೂರು

ಬೆಳ್ತಂಗಡಿ: ಅಮ್ಮನ ಪ್ರಾಣ ಉಳಿಸಲು ನೆರವಾಗಿ ಎಂದು ಡಿಎಸ್‌ಎಸ್ ಸಂಘಟನೆಗೆ ಮನಕಲಕುವ ಪತ್ರ ಬರೆದ ಬಾಲಕಿ

Girl writes letter to DSS, asks it to help save her mother's life
Photo Credit : News Kannada

ಬೆಳ್ತಂಗಡಿ; ಹೊಟ್ಟೆಯಲ್ಲಿ ಗಡ್ಡೆ ಕ್ಯಾನ್ಸರ್‌ಗೊಳಗಾಗಿರುವ ನನ್ನ ಅಮ್ಮನ ಚಿಕಿತ್ಸೆಗೆ ಲಕ್ಷಾಂತರ ರೂ ಬೇಕಾಗುತ್ತದೆ. ಅಮ್ಮನ ಪ್ರಾಣ ಉಳಿಸಲು ನೆರವಾಗಿ ಎಂದು ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿರುವ 11 ರ ಹರೆಯದ ಬಾಲಕಿಯೊಬ್ಬಳು ಡಿಎಸ್‌ಎಸ್ ಸಂಘಟನೆಗೆ ಮನಕಲಕುವ ಪತ್ರ ಬರೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಕೊರಜಂಡ ಮನೆ ನಿವಾಸಿ‌ ದಿ. ವಾಸಪ್ಪ ಎಂಬವರ ಪುತ್ರಿ ವಿತೀತಾ ಎಂಬವರೇ ಈ ರೀತಿ ಪತ್ರ ಬರೆದು ಸಹಾಯ ಯಾಚಿಸಿರುವ ಬಾಲಕಿ.

ನಾನು ನನ್ನ ತಂದೆಯನ್ನು ಹಲವು ವರ್ಷಗಳ ಹಿಂದೆಯೇ ಮರ. ಮೈ ಮೈಲೆ ಬಿದ್ದು‌ ನಡೆದ ಘಟನೆಯಲ್ಲಿ ಕಳೆದುಕೊಂಡಿದ್ದೇನೆ. ನಾನು ಕಣಿಯೂರು ಶಾಲೆಯಲ್ಲಿ6 ನೇ ತರಗತಿಯಲ್ಲಿ ಓದುತ್ತಿದ್ದರೆ, ನನ್ನ‌ ಸಹೋದರ 2 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನನ್ನ ಅಮ್ಮ ಪದ್ಮುಂಜ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ದುಡಿದು ನಮ್ಮನ್ನು ಸಾಕುತ್ತಿದ್ದರು.

ಇದ್ದಕ್ಕಿದ್ದಂತೆ ಅವರಿಗೆ ಹೊಟ್ಟೆಯೊಳಗೆ ನೋವು ಕಾಣಿಸಿಕೊಂಡಾಗ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಅದು ಗಡ್ಡೆ ಕ್ಯಾನ್ಸರ್ ಎಂದು ತಿಳಿಯಿತು. ಎಲ್ಲೆಲ್ಲಿಂದಲೂ ಹಣ ಒಟ್ಟುಗೂಡಿಸಿ 3-4. ಲಕ್ಷ ರೂ. ವ್ಯಯಿಸಿ ಚಿಕಿತ್ಸೆ ಮಾಡಲಾಯಿತು. ‌ಇದೀಗ ಮತ್ತೆ ರೋಗ ಉಲ್ಬಣಿಸಿ ಅಮ್ಮ ಹಾಸಿಗೆ ಹಿಡಿದಿದ್ದಾರೆ. ಇದೀಗ ಮತ್ತೆ ಆಪರೇಷನ್ ಆಗಬೇಕೆಂದು ಹೇಳಿದ್ದು ಚಿಕಿತ್ಸೆ ಪಡೆಯಬೇಕಾಗಿದೆ. ಇದಕ್ಕೆ ಇನ್ನೂ 4-5 ಲಕ್ಷ ರೂ. ಬೇಕಿದೆ ಎಂದಿದ್ದಾರೆ‌. ಆದ್ದರಿಂದ ಡಿಎಸ್‌ಎಸ್ ಸಂಘಟನೆ ಮತ್ತು ಸಾರ್ವಜನಿಕರು ನೆರವಾಗಬೇಕು ಎಂದು ಭಿನ್ನವಿಸಿಕೊಂಡಿದ್ದಾಳೆ.

ಸಹಾಯ ಮಾಡಬಯಸುವವರು;
Vinaya
AC No. 1599101010052
IFSC CODE:
CNRB 0001599
CANARA BANK PADMUNJA
Phone number; 7760422885

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು