ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಜಲ್ಲಿಗುಡ್ಡೆ ಸ್ವಸ್ತಿಕ್ ಕಲಾ ಕೇಂದ್ರ ವಿಂಶತಿ ವರ್ಷಾಚರಣೆಯ ಸರಣಿ ಕಾರ್ಯಕ್ರಮಗಳನ್ವಯ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ಸಸ್ ಹಾಗೂ ನ್ಯೂಸ್ ಕರ್ನಾಟಕ ಸಹಭಾಗಿತ್ವದಲ್ಲಿ ಆರು ದಿನಗಳ ಕಾಲ ಅಂದರೆ ಜೂನ್ 19 ರಿಂದ ಜೂನ್ 24 ರ ತನಕ ಶಾಲಾ ವಿದ್ಯಾರ್ಥಿಗಳಿಗಾಗಿ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಜೂನ್ 19 ರಂದು ನಾಗೂರಿ ಗಾರ್ಡಿಯನ್ ಏಂಜಲ್ಸ್ ಹಿ.ಪ್ರಾ.ಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ನಂತರದ ದಿನಗಳಲ್ಲಿ ಜೂನ್ 20 ಕಪಿತಾನಿಯೋ ಹಿ.ಪ್ರಾ. ಶಾಲೆ ನಾಗೂರಿ, ಜೂನ್ 21 ಜಿ.ಪಂ.ಹಿ.ಪ್ರಾ.ಶಾಲೆ ಬಜಾಲ್ ನಂತೂರು, ಜೂನ್ 22 ಜಿ.ಪಂ.ಹಿ.ಪ್ರಾ. ಶಾಲೆ ಬಜಾಲ್ ಪಡ್ಪು, ಜೂನ್ 23 ಸೈಂಟ್ ಜೋಸೆಫ್ಸ್ ಫ್ರೌಢ ಶಾಲೆ ಬಜಾಲ್ ಹಾಗೂ ಜೂನ್ 24 ಆದರ್ಶ ವಿದ್ಯಾನಿಲಯ ಹಿ.ಪ್ರಾ.ಶಾಲೆ,ಕರ್ಮಾರ್ ಪಡೀಲ್ ಇಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಇನ್ನು ಪ್ರತೀ ದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆಯೊಂದಿಗೆ ಕಣ್ಣಿನ ರಕ್ಷಣೆಯ ಬಗ್ಗೆ ಎ.ಜೆ. ಆಸ್ಪತ್ರೆಯ ತಜ್ಞ ವೈದ್ಯರು ಮಾಹಿತಿ ನೀಡಲಿದ್ದಾರೆ.