ಸುರತ್ಕಲ್: ಸುರತ್ಕಲ್ ಸಮೀಪದ ಬೈಕಂಪಾಡಿ ಹೆದ್ದಾರಿ ಬದಿ ಇರುವ ಎಚ್ಪಿ ಪೆಟ್ರೋಲ್ ಪಂಪ್ ಸಮೀಪದ ರಸ್ತೆಯ ಹೆದ್ದಾರಿ ಗುಂಡಿಗೆ ವ್ಯಕ್ತಿಯೊರ್ವರು ಬಲಿಯಾಗಿದ್ದಾರೆ. ಸುರತ್ಕಲ್ ರಸ್ತೆಯಲ್ಲಿರುವ ಗುಂಡಿ ಮುಚ್ಚುವಂತೆ ಮನವಿ ಮಾಡಿಕೊಂಡರೂ ಕೇಳದ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿಯಾದಂತಾಗಿದೆ.
ಎಚ್ಪಿ ಪೆಟ್ರೋಲ್ ಪಂಪ್ ಬಳಿಯ ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿಯೊಂದಿದ್ದು, ಗ್ರಹಚಾರಕ್ಕೆ ಅದೇ ಗುಂಡಿಗೆ ವ್ಯಕ್ತಿಯೋರ್ವರ ಬೈಕ್ ಬಿದ್ದಿದೆ. ಇದರಿಂದ ಅವರು ಬೈಕ್ನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು ಅದೇ ಸಮಯಕ್ಕೆ ಬಂದ ಲಾರಿಯ ಚಕ್ರ ಇವರ ಮೇಲೆಯೇ ಚಲಿಸಿ ಪ್ರಾಣ ಕಳೆದುಕೊಂಡಿದ್ದಾರೆ.