ಮಂಗಳೂರು: ಸುರತ್ಕಲ್ ಇಡ್ಯಾ ಗ್ರಾಮದ ಗೋವಿಂದ ದಾಸ ಕಾಲೇಜಿನ ಬಳಿ ಇಬ್ಬರು ಒರಿಸ್ಸಾ ಮೂಲದವರಾದ ಚಿಂತಾಮಣಿ ಮತ್ತು ದೂಬ ಎಂಬವರ ಹತ್ತಿರ ಮಾದಕ ದ್ರವ್ಯವಾದ ಗಾಂಜಾ ಮಾರಾಟ ಮಾಡಲೆಂದು ಬಂದವರಿಂದ ಸುಮಾರು 3 ಕೆಜಿ 180 ಗ್ರಾಂ ಪ್ರಮಾಣದ ಗಾಂಜಾವನ್ನು ಸ್ವಾಧೀನ ಪಡೆಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರವರಾದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದರ್ ಸಿಬ್ಬಂದಿಗಳಾದ ಅಜಿತ್, ಅಣ್ಣಪ್ಪ, ದಿಲೀಪ್ ಮತ್ತು ಕಾರ್ತಿಕ್ ರವರ ತಂಡ ಪಾಲ್ಗೊಂಡಿರುತ್ತಾರೆ.