ಉಳ್ಳಾಲ, ಆ.5: ಒಲ್ಲದ ವರನನ್ನ ಮನೆಯವರ ಒತ್ತಾಯಕ್ಕೆ ಮದುವೆಯಾಗಿದ್ದ ನವ ವಿವಾಹಿತ ಯುವತಿ ಹಸೆಮಣೆಯೇರಿದ 15 ದಿವಸದಲ್ಲೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ನಿವಾಸಿ ರಶ್ಮಿ ವಿಶ್ವಕರ್ಮ (24) ಮೃತ ಯುವತಿ.
ಕಳೆದ ಆಗಸ್ಟ್ 21 ರಂದು ಅಂಬ್ಲಮೊಗರಿನ ರಶ್ಮಿಯನ್ನು ಗಂಜಿಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬವರಿಗೆ ಮದುವೆ ಮಾಡಲಾಗಿತ್ತು. ಏಳು ತಿಂಗಳ ಹಿಂದೆ ಸಂದೀಪ್ ಮತ್ತು ರಶ್ಮಿ ವಿವಾಹ ನಿಶ್ಚಯವಾಗಿದ್ದು ರಶ್ಮಿ ಒಲ್ಲದ ಮನಸ್ಸಲ್ಲೇ ವಿವಾಹವಾಗಿದ್ದರು ಎನ್ನಲಾಗಿದೆ.
ಈ ನಡುವೆ, ಕಳೆದ ಸೆ.3 ರಂದು ಮಂಗಳೂರಿನ ಕೋಡಿಕಲ್ ನಲ್ಲಿರುವ ರಶ್ಮಿಯ ಅಕ್ಕನ ಮನೆಯಲ್ಲಿ ನವ ವಿವಾಹಿತ ಜೋಡಿಗೆ ಔತಣ ಕೂಟ ಏರ್ಪಡಿಸಿದ್ದರು. ಅಂದು ಬೆಳಗ್ಗೆ ರಶ್ಮಿ ತನ್ನ ಮನೆಯವರಲ್ಲಿ ತಾನು ಇಲಿ ಪಾಷಾಣ ಸೇವಿಸಿರುವುದಾಗಿ ಹೇಳಿದ್ದರಂತೆ. ವಾಂತಿ ಮಾಡಿ ಅಸ್ವಸ್ಥಳಾಗಿದ್ದ ರಶ್ಮಿಯನ್ನ ಕುಟುಂಬಸ್ಥರು ದೇರಳಕಟ್ಟೆ ಖಾಸಗಿ ಅಸ್ಪತ್ರೆಗೆ ಸೇರಿಸಿದ್ದರು. ಇಂದು ಮುಂಜಾನೆ ರಶ್ಮಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರಶ್ಮಿಯ ಪತಿ ಸಂದೀಪ್ ಅವರು ಮೂಲತಃ ಗಂಜಿ ಮಠದವರಾಗಿದ್ದರೂ ಅವರ ಕುಟುಂಬ ಮುಂಬೈಯಲ್ಲಿ ನೆಲೆಸಿತ್ತು. ಮದುವೆ ಆದ ಬಳಿಕ ರಶ್ಮಿ ಗಂಡನ ಜೊತೆ ಹೋಗದೇ ತವರು ಮನೆಯಲ್ಲಿಯೇ ಇದ್ದಳು ಎನ್ನಲಾಗುತ್ತಿದೆ. ಕೊಣಾಜೆ