ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ವಳಂಬ್ರ ಪರಿಸರದಲ್ಲಿ ಕಳೆದ ಎರಡು ದಿನ ರಾತ್ರಿ ಆನೆಗಳ ಹಾವಳಿ ಕಂಡು ಬಂದಿದೆ. ವಳಂಬ್ರದ ಕಿಶೋರ್ ಎಂಬವರ ತೋಟಕ್ಕೆ ಎರಡು ದಿನ ರಾತ್ರಿ ದಾಳಿ ನಡೆಸಿರುವ ಕಾಡಾನೆ 25ಕ್ಕಿಂತ ಅಧಿಕ ಸುಮಾರು ಆರು ವರ್ಷ ಪ್ರಾಯದ ಅಡಕೆ ಗಿಡಗಳನ್ನು ಮುರಿದು ಹಾಕಿದೆ. ಪರಿಸರದ ಇತರ ತೋಟಗಳಿಗೂ ಆನೆ ದಾಳಿ ಮಾಡಿದೆ. ಈ ಪ್ರದೇಶದಲ್ಲಿ ಒಂಟಿಸಲಗ ಹಾಗೂ ಇನ್ನೊಂದು ಆನೆಗಳ ಗುಂಪು ಇರುವ ಕುರಿತು ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಮುಂಡಾಜೆ ಆಸುಪಾಸಿನ ಗ್ರಾಮಗಳಲ್ಲಿ ನಿರಂತರ ಕಾಡಾನೆ ದಾಳಿ ನಡೆಯುತ್ತಿದ್ದರೂ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳದಿರುವುದಕ್ಕೆ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ