News Karnataka Kannada
Thursday, May 02 2024
ಮಂಗಳೂರು

ಅಮೃತಸಿರಿ ಯೋಜನೆ ಮೂಲಕ ೭೫ ಫಲಾನುಭವಿಗಳಿಗೆ ಗೋದಾನ ಮಾಡಲಾಯಿತು

New Project 2021 08 15t100728.464
Photo Credit :

ಬೆಳ್ತಂಗಡಿ : ಅಮೃತಸಿರಿ ಯೋಜನೆ ಮೂಲಕ ಸ್ವಾತಂತ್ರ್ಯದ ಅಮೃತಮಹೋತ್ಸವದಂದು ೭೫ ಫಲಾನುಭವಿಗಳಿಗೆ ಗೋದಾನದ ಮಾಡಲಾಗಿದೆ , ಕೃಷಿ ಪರಂಪರೆ ಹಾಗೂ ಹಿಂದು ಸಂಪ್ರದಾಯದಲ್ಲಿ ಗೋವಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬೆಳ್ತಂಗಡಿ ಪಶುಸಂಗೋಪನಾ ಇಲಾಖೆ, ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘ ಸಂಯುಕ್ತ ಆಶ್ರಯದಲ್ಲಿ ಸರಕಾರದ ಅಮೃತ ಸಿರಿ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ೭೫ ಫಲಾನುಭವಿಗಳಿಗೆ ಪಶು ಇಲಾಖೆ ವಠಾರದಲ್ಲಿ ಸ್ವಾತಂತ್ರ್ಯ ಮಹೋತ್ಸವ ಅಮೃತಮಹೋತ್ಸದಂದು ೭೫ ಹೆಣ್ಣು ಕರು ವಿತರಿಸಿ ಮಾತನಾಡಿದರು.ತಾಲೂಕಿನ ಪ್ರತಿ ಇಲಾಖೆಯಡಿ ೭೫ ಫಲಾನುಭವಿಗಳನ್ನ ಆಯ್ಕೆ ಮಾಡಿ ೫,೬೦೦ ಕ್ಕೂ ಮಿಕ್ಕಿ ಫಲಾನುಭವಿಗಳಿಗೆ ತಲುಪಿಸುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನ ೫ ಗೋಶಾಲೆಗಳಿಗೆ ಸರಕಾರದಿಂದ ಕೊಡಮಾಡಿದ ಅನುದಾನ ಸಹಿತ ಅಮೃತಸಿರಿ ಯೋಜನೆಯಡಿ ಕೊಯಿಲ ಫಾರ್ಮ್‌ನಿಂದ ೧೨, ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ೪೩, ಕೊಕ್ಕಡ ಗೋ ಆಶ್ರಮದಿಂದ ಪಡೆದ ೨೦ ಸೇರಿ ಒಟ್ಟು ೭೫ ಹೆಣ್ಣು ಕರುಗಳನ್ನು ತಾಲೂಕಿನ ೭೫ ಫಲಾನುಭವಿಗಳಿಗೆ ಶಾಸಕರು ಹಸ್ತಾಂತರಿಸಿದರು.

ಕೆ.ಎಂ.ಎಫ್. ನಿರ್ದೇಶಕ ಪದ್ಮನಾಭ ಅರ್ಕಜೆ, ಪ.ಪಂ.ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ತಹಶೀಲ್ದಾರ್ ಮಹೇಶ್ ಜೆ., ತಾ.ಪಂ. ಇ.ಒ. ಕುಸುಮಾಧರ್ ಬಿ., ಪ.ಪಂ. ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಪ.ಪಂ.ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ವೃತ್ತನಿರೀಕ್ಷಕ ಶಿವಕುಮಾರ್, ಮುಖ್ಯ ಪಶುವೈದ್ಯಾಧಿಕಾರಿ ಡಾ| ಮಂಜನಾಯ್ಕ್, ಪಶುಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಡಾ| ಯತೀಶ್, ಡಾ| ವಿನಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜಾನುವಾರು ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಜೈನ್ ಪ್ರಸ್ತಾವಿಸಿ, ಕಾರ್ಯಕ್ರಮ ನಿರ್ವಹಿಸಿದರು. ಡಾ| ಕಾರ್ತಿಕ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು