ಬೆಳ್ತಂಗಡಿ: ಕಳೆದ ಐದು ದಿನಗಳ ಹಿಂದೆ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಬಳ್ಳಿ ವಾಳ್ಯದ ಗೋವಿಂದ ಚಿಪಳೂಣ್ಕರ್ ಅವರ ಅಡಕೆ ತೋಟಕ್ಕೆ ಸಿಡಿಲು ಬಡಿದು ನೂರಕ್ಕಿಂತ ಹೆಚ್ಚಿನ ಅಡಕೆಮರಗಳ ನಾಶವಾಗಿವೆ ಈ ಭಾಗದಲ್ಲಿ ಕೆಲವು ದಿನಗಳಿಂದ ಮಳೆ ಜತೆ ವಿಪರೀತ ಗುಡುಗು-ಸಿಡಿಲು ಕೂಡ ಇದ್ದು ಇವರ ತೋಟದಲ್ಲಿ ಸಿಡಿಲಿನ ಆಘಾತವುಂಟಾಗಿರುವುದು ಬುಧವಾರ ಬೆಳಕಿಗೆ ಬಂದಿದೆ. ಈಗಾಗಲೇ 100ಕ್ಕಿಂತ ಅಧಿಕ ಹ ಅಡಕೆ ಮರಗಳು ಸುಟ್ಟ ಸ್ಥಿತಿ ತಲುಪುತ್ತಿದ್ದು ಇದರ ಸಂಪೂರ್ಣ ಪರಿಣಾಮ ತಿಳಿಯಲು ಇನ್ನೂ ಕೆಲವು ದಿನ ಕಾಯಬೇಕಾದ ಅಗತ್ಯವಿದೆ.
ಅಡಕೆ ತೋಟಕ್ಕೆ ಸಿಡಿಲು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.