ಬೆಳ್ತಂಗಡಿ: ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಶನಿವಾರ ಋಗುಪಾಕರ್ಮ ಭಾನುವಾರ ಯಜುರುಪಾಕರ್ಮ ಕಾರ್ಯಕ್ರಮ ಕೋವಿಡ್ ಮುನ್ನೆಚ್ಚರಿಕೆಗಳೊಂದಿಗೆ ಜರಗಿತು.
ವೇದಮೂರ್ತಿಗಳಾದ ಪುರುಷೋತ್ತಮ ಮರಾಠೆ, ಗೋಪಾಲಕೃಷ್ಣ ಜೋಶಿ, ಶ್ರೀನಿವಾಸ ಗೋಖಲೆ,ಋತುಪರ್ಣ ಡೋಂಗ್ರೆ,ರವಿಕಿರಣ ಮರಾಠೆ ನೇತೃತ್ವ ವಹಿಸಿದ್ದರು.
ಉಪಾಕರ್ಮ ಸಮಿತಿ ಅಧ್ಯಕ್ಷ ಪ್ರಹ್ಲಾದ ಫಡ್ಕೆ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಗೋಖಲೆ, ಅರೆಕಲ್ಲು ರಾಮಚಂದ್ರ ಭಟ್, ಮಹಾದೇವ ಬೆಂಡೆ, ಪ್ರಶಾಂತ್ ನಾತು, ವಿಶ್ವನಾಥ ಬೆಂಡೆ,ನಾರಾಯಣ ಫಡ್ಕೆ,ವಾಮನ ಬೆಂಡೆ, ಸುಧೀರ್ ಪರಾಂಜಪೆ, ಮತ್ತಿತರರು ಉಪಸ್ಥಿತರಿದ್ದರು.