ಬೆಳ್ತಂಗಡಿ : ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾದಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡ ವಿಜೇತರಾಗಿದ್ದು ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಟ್ರೋಫಿ ಯನ್ಬು ತನ್ನದಾಗಿಸಿಕೊಂಡಿದೆ.
ಫೈನಲ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜು ತಂಡ ವಿಕಾಸ ಕಾಲೇಜು ತಂಡವನ್ನು(38_25) ಅಂಕಗಳಿಂದ ಸೋಲಿಸಿ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಪಂದ್ಯಾಟದಲ್ಲಿ ತೃತೀಯ ಸ್ಥಾನವನ್ನು ಪ್ರೇರಣಾ ಇಂಡಸ್ ಕಾಲೇಜು ಪುತ್ತೂರು ತಂಡ ತನ್ನದಾಗಿಸಿಕೊಂಡರೆ ನಾಲ್ಕನೇ ಸ್ಥಾನವನ್ನು ಎನ್ ಎಂ ಸಿ ಸುಳ್ಯ ತಂಡ ಪಡೆದುಕೊಂಡಿದೆ.
ಸೆಮಿಫೈನಲ್ಸ್ ನಲ್ಲಿ ಆಳ್ವಾಸ್ ಕಾಲೇಜು ತಂಡ ಪ್ರೇರಣಾ ಇಂಡಸ್ ಕಾಲೇಜು ಪುತ್ತೂರು ತಂಡವನ್ನು ಸೋಲಿಸಿದರೆ ವಿಕಾಸ್ ಕಾಲೇಜು ಮಂಗಳೂರು ತಂಡ ಎನ್.ಎಂ.ಸಿ ಸುಳ್ಯ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಪಂದ್ಯಾಟದಲ್ಲಿ ಅತ್ಯುತ್ತಮ ರೈಡರ್ ಆಗಿ ಆಳ್ವಾಸ್ ಕಾಲೇಜಿನ ರಂಜಿತ್ ಅತ್ಯುತ್ತಮ ಕ್ಯಾಚರ್ ಆಗಿ ಆಳ್ವಾಸ್ ಕಾಲೇಜಿನ ಓಂಕಾರ್ ಅತ್ಯುತ್ತಮ ಆಲ್ ರೌಂಡರ್ ಆಗಿ ವಿಕಾಸ್ ಕಾಲೇಜಿನ ಕಾರ್ತಿಕ್ ಬಾಬು ಆಯ್ಕೆಯಾಗಿದ್ದರೆ.