ಮಂಗಳೂರು : ಪೊಲೀಸರನ್ನು ಶ್ವಾನಕ್ಕೆ ಹೋಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದ್ರು.
ಪೊಲೀಸರ ಕಾರ್ಯವೈಖರಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಇಡೀ ಇಲಾಖೆಯನ್ನೇ ಶ್ವಾನಕ್ಕೆ ಹೋಲಿಸಿ ಎಂಜಲ್ ತಿನ್ನುವ ಕೀಳು ಮಟ್ಟದ ಹೇಳಿಕೆ ನೀಡಿದ್ರು. ಇಂತಹ ಅಸಹಾಯಕತೆಯ ಮಾತುಗಳು ಗೃಹ ಸಚಿವರಿಗೆ ಶೋಭೆತರಲ್ಲ, ಗೃಹ ಖಾತೆಯ ಸಚಿವರಾಗಿ ಮುಂದುವರಿಯಲು ಅವರು ಅರ್ಹರಲ್ಲ. ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ ಐಪಿಎಸ್ ಅಗಿದ್ದವರ ಪೈಕಿ ಒಳ್ಳೆಯ ಅಧಿಕಾರಿಗಳು ಇದ್ದಾರೆ.
ಪೊಲೀಸ್ ಇಲಾಖೆ ವರ್ಗಾವಣೆ ವಿಚಾರದಲ್ಲಿ ದಂಧೆ ನಡೆಯುತ್ತಿದೆ, ಭ್ರಷ್ಟಾಚಾರ ಬಗ್ಗೆ ಮಾತನಾಡುವವರು 40% ಕಮಿಷನ್ ಕೇಳ್ತಾರೆ ಎಂದು ಗುತ್ತಿಗೆದಾರರು ಅರೋಪ ಮಾಡ್ತಿದ್ದಾರೆ ಅಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ ಎಂದರು.