ಮಂಗಳೂರು : ಭಾರತೀಯ ಕೋಸ್ಟ್ ಗಾರ್ಡ್ನ ಸಮಯೋಚಿತ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಕಾರವಾರದ ಬಳಿ ಮೀನುಗಾರಿಕಾ ದೋಣಿಗೆ ಬೆಂಕಿ ಹೊತ್ತಿಕೊಂಡು ಸಂಕಷ್ಟದಲ್ಲಿದ್ದ ಏಳು ಮೀನುಗಾರರ ಜೀವವನ್ನು ಉಳಿಸಿದೆ.
ಕರಾವಳಿ ಕಾವಲು ಪಡೆ ಕರ್ನಾಟಕ ತಂಡ ಮೀನುಗಾರರನ್ನು ರಕ್ಷಿಸಿ ದೋಣಿಯಲ್ಲಿದ್ದ ಬೆಂಕಿಯನ್ನು ಶುಕ್ರವಾರ ನಂದಿಸಿದೆ ಎಂದು ಕರಾವಳಿ ರಕ್ಷಣಾ ಪಡೆ ಪ್ರಕಟಣೆ ತಿಳಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ ನವಮಂಗಳೂರಿನ ಸಾಗರ ರಕ್ಷಣಾ ಉಪಕೇಂದ್ರ (ಎಂಆರ್ಎಸ್ಸಿ)ಗೆ ಐಎಫ್ಬಿ ವರ್ದಾ ಬೆಂಕಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿತು.
ಕೋಸ್ಟಲ್ ಗಾರ್ಡ್ ರಕ್ಷಣಾ ನೌಕೆ ಸಿ 155 ಸ್ಥಳಕ್ಕೆ ತೆರಳಿ ಏಳು ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ದೋಣಿ ಐಎಫ್ಬಿ ವಜ್ರಾಗೆ ಸ್ಥಳಾಂತರಿಸಿತು. ಹವಾಮಾನ ವೈಪರೀತ್ಯದ ನಡುವೆ ಕೋಸ್ಟ್ ಗಾರ್ಡ್ ಬೆಂಕಿಯನ್ನು ನಂದಿಸಲು ಸುಮಾರು ಮೂರು ಗಂಟೆಗಳ ಕಾಲ ತೆಗೆದುಕೊಂಡಿತು.ನಂತರ ಕೋಸ್ಟ್ ಗಾರ್ಡ್ ತಂಡವು ಐಎಫ್ಬಿ ವಜ್ರಕ್ಕೆ ಸುಟ್ಟು ಕರಕಲಾದ ದೋಣಿಯನ್ನು ಕಾರವಾರ ಮೀನುಗಾರಿಕಾ ಬಂದರಿಗೆ ಎಳೆಯಲು ನೆರವು ನೀಡಿತು. ಶನಿವಾರ ಮುಂಜಾನೆ 4 ಗಂಟೆಗೆ ಕಾರವಾರದ ಕರಾವಳಿ ಭದ್ರತಾ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಕರಾವಳಿ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.
ಎಲ್ಲಾ ಏಳು ಮೀನುಗಾರರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಪ್ರಕಟಣೆ ತಿಳಿಸಿದೆ.