News Karnataka Kannada
Sunday, April 28 2024
ಮಂಗಳೂರು

ನಾಗಬನ ಧ್ವಂಸ ಪ್ರಕರಣ ಹಿನ್ನೆಲೆ, ಎಂಟು ಮಂದಿ ಆರೋಪಿಗಳ ಬಂಧನ

Arrest 22082021
Photo Credit :

ಮಂಗಳೂರು: ಇಲ್ಲಿನ ಕೂಳೂರು ಮತ್ತು ಕೋಡಿಕಲ್ ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಬೇರೆ ಕೃತ್ಯಗಳನ್ನು ತೊಡಗಿದ್ದು, ಪೊಲೀಸರ ಗಮನ ಬೇರೆಡೆ ಸೆಳೆಯಲು ಈ ನಾಗಬನ ಧ್ವಂಸ ಕೃತ್ಯ ನಡೆಸಿದ್ದರು ಎಂದು ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ತಿಳಿಸಿದ್ದಾರೆ.

ಸಫಾನ್, ಪ್ರವೀಣ್ ಮೊಂತೆರೊ, ಮುಹಮ್ಮದ್ ಸುಹೇಲ್, ನಿಖಿಲೇಶ್, ಜಯಂತ್, ಮಂಜುನಾಥ್, ನೌಶಾದ್ ಮತ್ತು ಪ್ರತೀಕ್ ಬಂಧಿತ ಆರೋಪಿಗಳು. ಆರೋಪಿಗಳು ಕೂಳೂರು, ಕಾವೂರು ಪರಿಸರದವರಾಗಿದ್ದು, ಒಬ್ಬ ಆರೋಪಿ ಹಾಸನ ಮೂಲದಾತ ಎಂದು ತಿಳಿದು ಬಂದಿದೆ.

ಕೂಳೂರು ಮತ್ತು ಕೋಡಿಕಲ್ ನಲ್ಲಿ ಈ ತಂಡವೇ ಕೃತ್ಯ ನಡೆಸಿತ್ತು ಎಂದು ಆಯಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೇರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ತಂಡ ಪೊಲೀಸರ ದಿಕ್ಕು ತಪ್ಪಿಸಲು ಮತ್ತು ಶಾಂತಿ ಕದಡಲು ನಾಗಬನಗಳ ಧ್ವಂಸ ಮಾಡಿತ್ತು ಎಂದು ಅವರು ಮಾಹಿತಿ ನೀಡಿದರು.

ನವೆಂಬರ್ 13 ರಂದು ಕೋಡಿಕಲ್ ಮತ್ತು ಅಕ್ಟೋಬರ್ 23 ರಂದು ಕುಳೂರಿನಲ್ಲಿ ದುಷ್ಕರ್ಮಿಗಳು ಆಯುಧಗಳನ್ನು ಬಳಸಿ, ನಾಗನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು