News Karnataka Kannada
Saturday, April 27 2024
ಮಂಗಳೂರು

ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ವತಿಯಿಂದ ಪುಸ್ತಕ ವಿತರಣೆ

Book
Photo Credit :

ಬೆಳ್ತಂಗಡಿ: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಾಂತೆ ಮಕ್ಕಳನ್ನು ಸಣ್ಣ ವಯಸ್ಸಿನಲ್ಲಿಯೇ ಅವರ ಇಷ್ಟದಂತೆ ಬೆಳೆಸಿದರೆ ಉತ್ತಮ ಪ್ರಜೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಪ್ರಯತ್ನ ಮಾಡಬೇಕು ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಹೇಳಿದರು ‌.

ಅವರು ಕಿ.ಪ್ರಾ ಶಾಲೆ ಕುಂಟಿನಿ ಲಾಯಿಲ ಇಲ್ಲಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ವತಿಯಿಂದ ಪುಸ್ತಕ ವಿತರಣೆ ಮಾಡಿ ಮಾತನಾಡುತ್ತಿದ್ದರು.

ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ನಾವು ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದರೆ ಉತ್ತಮ ಶಿಕ್ಷಣದೊಂದಿಗೆ ಹೆತ್ತವರು , ಶಾಲೆ ಸೇರಿದಂತೆ ಇಡೀ ದೇಶಕ್ಕೆ ಉತ್ತಮ ಹೆಸರು ತರಲು ಸಾಧ್ಯವಿದೆ. ಶಿಕ್ಷಕರ ತರಬೇತಿಗೆ ಮನೆಯಲ್ಲಿಯೂ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕಾದ ಜವಾಬ್ದಾರಿ ಪೋಷಕರದು ಎಂದರು.

ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಮಾತನಾಡುತ್ತಾ ಪುಸ್ತಕ ವಿತರಣೆ ಕಾರ್ಯಕ್ರಮ ಶ್ಲಾಘನೀಯವಾದುದು. ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ , ಉನ್ನತ ಮಟ್ಟಕ್ಕೆ ಏರುವ ಮೂಲಕ ಕೃತಜ್ಞತೆ ಸಲ್ಲಿಸಿದರೆ ಬೆಸ್ಟ್ ಫೌಂಡೇಶನ್ ಕಾರ್ಯ ಸಾರ್ಥಕವಾಗುತ್ತದೆ. ಬಾಲ್ಯವನ್ನು ಅನುಭವಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ವೇದಿಕೆಯಲ್ಲಿ ಬೆಸ್ಟ್ ಫೌಂಡೇಶನ್ ಗೌರವ ಸಲಹೆಗಾರ, ಮಾಜಿ ತಾ.ಪಂ ಸದಸ್ಯ ಬಿ.ಎಲ್ ಸುಧಾಕರ , ಗ್ರಾಮ ಪಂಚಾಯತ್ ಸದಸ್ಯೆ ರೇವತಿ ವಿವೇಕಾನಂದ ನಗರ , ಬೆಸ್ಟ್ ಫೌಂಡೇಶನ್ ಸದಸ್ಯ ಸಲೀಂ ಆದರ್ಶನಗರ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇರ್ಫಾನ್, ಉಪಾಧ್ಯಕ್ಷೆ ಲಕ್ಷ್ಮೀ ಉಪಸ್ಥಿತರಿದ್ದರು.

ಮೊದಲಿಗೆ ಮುಖ್ಯೋಪಾಧ್ಯಾಯ ಲೋಕೇಶ್ ಸ್ವಾಗತಿಸಿ , ವಂದಿಸಿದರು. ಶಿಕ್ಷಕಿ ಲೀನಾ ಕಾರ್ಯಕ್ರಮ ನಿರ್ವಹಿಸಿ , ಶಿಕ್ಷಕಿ ಅಶ್ವಿನಿ ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು