ಬೆಳ್ತಂಗಡಿ : ಉಜಿರೆ ಗ್ರಾಮದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿ, ಶ್ರೀ ಶಾರದಾ ಮಂಟಪ ಹಾಗು ಶ್ರೀ ಕೃಷ್ಣಾನುಗ್ರಹ ಸಭಾಭವನದ ಕೇಂದ್ರ ಭಾಗದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಕೆ ಪ್ರತಾಪ ಸಿಂಹ ನಾಯಕ್ ಅವರ ಪ್ರದೇಶಾಭಿವೃದ್ಧಿ ಯೋಜನೆಯನ್ವಯ ಹೈಮಾಸ್ಟ್ ದೀಪವನ್ನು ಮಕರ ಸಂಕ್ರಮಣದ ಶುಭ ದಿನದಂದು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತಕೃಷ್ಣ ಪಡ್ವೆಟ್ನಾಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಸದಸ್ಯರಾದ ಉಷಾಕಿರಣ್ ಕಾರಂತ್, ವಿನೋಬಾ ಕಾರಂತ್, ಕೇಶವ ಭಟ್ ಅತ್ತಾಜೆ, ರಾಮಚಂದ್ರ ಶೆಟ್ಟಿ, ಭರತ್ ಕುಮಾರ್, ಯಶೋಧರ ಗೌಡ, ಪ್ರಶಾಂತ್, ಚರಣ್, ಬಾಲಕೃಷ್ಣ, ನಾರಾಯಣ, ಸಂತೋಷ್ ಅತ್ತಾಜೆ ಮೊದಲಾದವರು ಉಪಸ್ಥಿತರಿದ್ದರು.