ಮೈಸೂರು: ಒಂದು ಹಿಡಿ ಮರಳು ಮಾತ್ರವಲ್ಲ ಮಳಲಿಯ ಸಂಪೂರ್ಣ ದೇವಸ್ಥಾನ ಪಡೆದೇ ಪಡೆಯುತ್ತೇವೆ. ತಾಕತ್ತಿದರೆ ನೀವು ತಡೆಯಿರಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಎಸ್ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ಗೆ ಸವಾಲ್ ಹಾಕಿದರು.
ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಮಳಲಿ ಮಸೀದಿಯನ್ನು ದೇವಸ್ಥಾನ ಮಾಡುವುದು ಕನಸಿನ ಮಾತು, ಒಂದು ಹಿಡಿ ಮರಳನ್ನೂ ಕೊಡುವುದಿಲ್ಲ ಎಂಬ ಎಸ್ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಗೆ, ದೇವಸ್ಥಾನವನ್ನು ಕಾನೂನಿನ ಪ್ರಕಾರವೇ ಪಡೆಯುತ್ತೇವೆ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಸೌಹಾರ್ದತೆಯಿಂದ ಬದುಕುವ ಆಸೆ ಇದ್ದರೆ ಕಬಳಿಸಿರುವ ದೇವಸ್ಥಾನ ವಾಪಸ್ ಕೊಡಿ. ಇದು ಯಾರ ಅಪ್ಪನ ಸೊತ್ತು ಅಲ್ಲ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಹೇಳಿದ್ದಾರೆ.
ಇದು ನಮ್ಮ ಅಪ್ಪನದೇ ಏನಿವಾಗಾ? ಸೊಕ್ಕಿನ ಮಾತು ಬಿಡಿಪ್ರಚೋದನೆಗೆ ದಾರಿ ಮಾಡಿಕೊಡುತ್ತಿದೆ ಅವರ ಮಾತು. ನಮ್ಮ ಧರ್ಮದ ಸಂಪ್ರದಾಯದ ತಾಂಬೂಲ ಪ್ರಶ್ನೆ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ. ನಮ್ಮ ಶಾಸ್ತ್ರದ ಬಗ್ಗೆ ಮಾತನಾಡಿದ ಅವನು ಸರ್ವನಾಶವಾಗಿ ಹೋಗುತ್ತಾನೆ. ಇಂತಹ ಮಾತು ಆಡುತ್ತಿರುವ ವ್ಯಕ್ತಿ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಇಲ್ಲಿರುವ ಮುಸ್ಲಿಂ ಅಫ್ಘಾನಿಸ್ತಾನ ಅಥವಾ ಇನ್ನೊಂದು ದೇಶದಿಂದ ಬಂದಿದ್ದಲ್ಲ. ನೀವು ಹಿಂದೂಸ್ತಾನ್ನ ಇರೋದು. ನೀವು ಭಾರತೀಯರು. 30 ಸಾವಿರ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದೀರಿ. ನಿಮ್ಮ ರೀತಿಯಲ್ಲಿ ದಾಳಿ ಮಾಡಿ ನಾವು ತೆಗದುಕೊಳ್ಳುವುದಿಲ್ಲ. ತಾಂಬೂಲ ಶಾಸ್ತ್ರ, ಅಷ್ಟ ಮಂಗಳ ಇದು ವೈಜ್ಞಾನಿಕವಾಗಿದೆ ಎಂದರು.