News Karnataka Kannada
Friday, May 10 2024
ಮಂಗಳೂರು

ಮುಂಡಾಜೆ: ವಿದ್ಯುತ್ ಲೈನ್ ನಿಂದ ಬೆಂಕಿ, ತಪ್ಪಿದ ಅನಾಹುತ

Fire
Photo Credit : News Kannada

ಬೆಳ್ತಂಗಡಿ : ತಾಲೂಕಿನ ಮುಂಡಾಜೆಯ ಧುಂಬೆಟ್ಟು ಪರಿಸರದಲ್ಲಿ ಹಾದುಹೋಗಿರುವ 33ಕೆವಿ ಗುರುವಾಯನಕೆರೆ ಕಕ್ಕಿಂಜೆ ವಿದ್ಯುತ್ ಲೈನ್ ನಲ್ಲಿ ಹಾರಿದ ಬೆಂಕಿ ಕಿಡಿಗಳಿಂದ ಇಲ್ಲಿನ ಕಜೆ ಶ್ರೀಕೃಷ್ಣ ಭಟ್ ರವರ ರಬ್ಬರ್ ತೋಟದ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಸ್ಥಳೀಯರ ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳದ ಸಕಾಲಿಕ ಸ್ಪಂದನೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಬೆಂಕಿಯು ಪರಿಸರದಲ್ಲಿದ್ದ ಗಿಡಗಂಟಿಗಳು ಆವರಿಸಿ ಪಕ್ಕದ ರಬ್ಬರ್ ತೋಟದ ಪಸರಿಲು ಆರಂಭವಾಗುತ್ತಿದ್ದಂತೆ ಹತೋಟಿಗೆ ತರಲಾದ ಕಾರಣ ರಬ್ಬರ್ ಗಿಡಗಳಿಗೆ ಹೆಚ್ಚಿನ ಹಾನಿ ಉಂಟಾಗಿಲ್ಲ. ಬೆಂಕಿ ಆವರಿಸಿದ ಸಮೀಪವೇ ಒಂದು ಅಂಗಡಿ ಕೂಡ ಅದಕ್ಕೆ ಯಾವುದೇ ಹಾನಿ ಉಂಟಾಗಿಲ್ಲ.

ಗಿಡಗಂಟಿ ತೆರವಿಗೆ ಆಗ್ರಹ

ಈ ಲೈನ್ ನ ಟವರ್ ಗಳಿಗೆ ಭಾರಿ ಪ್ರಮಾಣದಲ್ಲಿ ಗಿಡಗಂಟಿಗಳು ಆವರಿಸಿವೆ. ಸದ್ಯ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಇವು ಒಣಗುತ್ತಿದ್ದು ಬೆಂಕಿ ಅವಘಡಗಳಿಗೆ ಆಹ್ವಾನ ನೀಡುತ್ತಿವೆ, ಇವುಗಳನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಉಜಿರೆ ಮೆಸ್ಕಾಂ ಉಪವಿಭಾಗದ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್ ಹಾಗೂ ಮುಂಡಾಜೆ ಶಾಖಾ ಕೇಂದ್ರದ ಜೆ.ಇ. ಶಂಕರ ಲಿಂಗೇಗೌಡ ತಕ್ಷಣ ಸ್ಪಂದನೆ ನೀಡಿ ಗುರುವಾರವೇ ಗಿಡಗಂಟಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು