ಬೆಳ್ತಂಗಡಿ: ನೀರಿನ ಪೈಪ್ ಒಡೆದು ಹಾಕಿದ ವಿಚಾರದಲ್ಲಿ ಪೊಲೀಸ್ ದೂರು ನೀಡಿದ ವ್ಯಕ್ತಿಗೆ ನೆರೆಕರೆಯ ವ್ಯಕ್ತಿ ಕತ್ತಿಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಹೇಡ್ಯದಿಂದ ವರದಿಯಾಗಿದೆ.
ಆರೋಪಿ ವಾಸು ಗೌಡ (67) ಎಂಬವರ ಮೇಲೆ ಲೂಯಿಸ್ ಎಂಬವರು ಕುಡಿಯುವ ನೀರಿನ ಪೈಪ್ ಒಡೆದು ಹಾಕಿದ ವಿಚಾರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೇ4ರಂದು ದೂರು ದಾಖಲಿಸಿದ್ದರು.
ಮೇ 8ರಂದು ಲೂಯಿಸ್ ಅವರು ಇಲ್ಲಿನ ಮಲ್ಲಡ್ಕ ಸಮೀಪ ರಸ್ತೆ ಬದಿ ನಿಂತಿದ್ದಾಗ ಆರೋಪಿಯು ಕತ್ತಿಯಿಂದ ಕಡಿದು ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ಕುರಿತು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.