ಬೆಳ್ತಂಗಡಿ: ಸಂಘಟನೆಗಳು ಸಮಾಜದ ಬಲವನ್ನು ಹೆಚ್ಚಿಸುತ್ತವೆ. ಸಂಘಟನೆಗಳ ಮೂಲಕ ಮಾಡುವ ಕಾರ್ಯಗಳು ಇತರರಿಗೆ ದಾರಿದೀಪವಾಗುತ್ತವೆ. ಮಾದರಿ ಸಮಾಜ ನಿರ್ಮಾಣಕ್ಕೆ ಸಂಘಟನೆಗಳ ಅಗತ್ಯವಿದೆ.ಆಚರಣೆಗಳು ಸಂಸ್ಕಾರವನ್ನು ಪ್ರತಿನಿಧಿಸುತ್ತವೆ ಎಂದು ವೇದಮೂರ್ತಿ ವಿಷ್ಣು ಡೋಂಗ್ರೆ ಹೇಳಿದರು.
ಅವರು ಭಾನುವಾರ ಲಾಯ್ಲದ ಶ್ರೀಸುಬ್ರಹ್ಮಣ್ಯ ಸಭಾಭವನದಲ್ಲಿ ಜರಗಿದ, ಬೆಳ್ತಂಗಡಿ- ಉಜಿರೆ ವಲಯದ ಚಿತ್ಪಾವನ ಬಳಗದ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಳಗದ ಅಧ್ಯಕ್ಷ ಗೋಪಾಲ ಪಟವರ್ಧನ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಚಿತ್ಪಾವನ ಸಮಾಜದ ಅಧ್ಯಕ್ಷ ಎಂ ಗಣಪತಿ ಜೋಷಿ, ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಬಳಗದ ಗೌರವಾಧ್ಯಕ್ಷ ಪ್ರೊ.ಎನ್.ಜಿ. ಪಟವರ್ಧನ್ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ತಿವಿಕ್ರಮ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾ ರಾಣಿ ಜೋಶಿ ವರದಿ ವಾಚಿಸಿದರು. ಖಜಾಂಜಿ ಯೋಗೀಶ್ ಭಿಡೆ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಯಶವಂತ ಪಟವರ್ಧನ್ ವಂದಿಸಿದರು. ರಶ್ಮಿ ಪಟವರ್ಧನ್ ಹಾಗೂ ಡಾ.ಮುಕ್ತಾ ಪಟವರ್ಧನ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ಪ್ರಭಾ ಪತ್ರಿಕೆ ಬಿಡುಗಡೆಗೊಳಿಸಲಾಯಿತು.ಉಜಿರೆಯ ಅನಸೂಯ ಫಾಟಕ್ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ, ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆಯವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜರಗಿದವು.
ಸನ್ಮಾನ
ಬಳಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಗೋವಿಂದ ದಾಮಲೆ, ತ್ರಿವಿಕ್ರಮ ಹೆಬ್ಬಾರ್, ಗೋಪಾಲ ಪಟವರ್ಧನ್ ಹಾಗೂ ಕಾರ್ಯರ್ಶಿಗಳಾಗಿ ಕಾರ್ಯ ನಿರ್ವಹಿಸಿದ ಶ್ರೀಕಾಂತ ಗೋರೆ, ಗಂಗಾರಾಣಿ ಜೋಷಿಯವರನ್ನು ಸನ್ಮಾನಿಸಲಾಯಿತು. ಉತ್ತಮ ಅಂಕಗಳನ್ನು ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ವಿಶಿಷ್ಟ ಸಾಧನೆಗೈದ ಅವರನ್ನು ಅಭಿನಂದಿಸಲಾಯಿತು.