News Karnataka Kannada
Tuesday, April 30 2024
ಮಂಗಳೂರು

ಪ್ರೇಕ್ಷಕರ ಮನಸೂರೆಗೊಂಡ ನಾಟಕ “ವಿ ದ ಪೀಪಲ್ ಆಫ್ ಇಂಡಿಯಾ “

Nataka
Photo Credit : News Kannada

ಬೆಳ್ತಂಗಡಿ ತಾಲೂಕಿನ  ಸಾಂಸ್ಕೃತಿಕ ಸಂಘಟನೆ  “ಸಮೂಹ ಉಜಿರೆ” ಇದ ರ ಆಶ್ರಯದಲ್ಲಿ ಮಾ. 2 ರಂದು  ಉಜಿರೆಯ ವನರಂಗ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಂಡ ರಂಗಾಯಣ ಶಿವಮೊಗ್ಗ ಇವರ  ಭಾರತೀಯ ಸಂವಿಧಾನ ಯೋಜನೆಯಡಿ  ಸಂಯೋಜನೆಗೊಂಡ ನಾಟಕ “ವಿ ದ ಪೀಪಲ್ ಆಫ್ ಇಂಡಿಯಾ” ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ ರಾಷ್ಟ್ರವಾದ ಭಾರತದ ವಿಶಿಷ್ಟವೂ, ಅನನ್ಯವೂ  ಆದ ಸಂವಿಧಾನ ರಚನೆಯ ಹಿನ್ನೆಲೆ ಹಾಗೂ ಅದರ ಪರಿಣಾಮಗಳನ್ನು ಕಲಾವಿದರು ಪರಿಣಾಮಕಾರಿಯಾಗಿ ಅಭಿನಯಿಸಿ ತೋರಿಸಿದರು.

ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವವನ್ನು ಎಳೆ ಎಳೆಯಾಗಿ ಅಭಿವ್ಯಕ್ತಿ ಗೊಳಿಸಿದರು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಉಜಿರೆ ಗ್ರಾ ಪಂ.ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ, ಭುಜಬಲಿ ಧರ್ಮಸ್ಥಳ , ಉಪನ್ಯಾಸಕರು ,ಉಜಿರೆ ,  ಬೆಳ್ತಂಗಡಿ ಮತ್ತು ಧರ್ಮಸ್ಥಳ ಪರಿಸರದ ಅಪಾರ ಸಂಖ್ಯೆಯ ಕಲಾಭಿಮಾನಿಗಳು, ವಿದ್ಯಾರ್ಥಿಗಳು ನಾಟಕವನ್ನು ವೀಕ್ಷಿಸಿದರು.

ಸಮೂಹ ಉಜಿರೆಯ ಅಧ್ಯಕ್ಷ ಡಾ.ಕುಮಾರ್ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ರಂಗಾಯಣ ಶಿವಮೊಗ್ಗ ತಂಡದ ವ್ಯವಸ್ಥಾಪಕ ಶೈಲೇಶ್, ತೀರ್ಥಹಳ್ಳಿ ನಾಟಕ ತಂಡವನ್ನು ಪರಿಚಯಿಸಿ ಸರ್ವರಿಗೂ ವಂದನೆ ಸಲ್ಲಿಸಿದರು. ಮಹೇಶ್ ಶೆಟ್ಟಿ ಹಾಗೂ ಸೋಮಶೇಖರ್ ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು