ವಿಜಯಪುರ: ನಗರದಲ್ಲಿರುವ ಗೋಳ ಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಶತ ಪ್ರಯ tgತ್ನ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಆದಿ ಬಣಜಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ನೀರಾವರಿಗೆ ಇನ್ನೂ ಒತ್ತು ನೀಡಲು ಆಲಮಟ್ಟಿ ಎತ್ತರವನ್ನು ಹೆಚ್ಚಿಸಲು ಸಂಸತ್ತಿನಲ್ಲಿ ದನಿ ಎತ್ತಿ ಸಾಕಾರಗೊಳಿಸುವೆ. ನನಗೊಂದು ಅವಕಾಶ ನೀಡಿದರೆ ನಿಮ್ಮೆಲ್ಲರ ಹಿತ ಕಾಪಾಡಲು ಶ್ರಮಿಸುತ್ತೇನೆ. ವ್ಯಾಪಾರ ವಹಿವಾಟು ಹೆಚ್ಚಿಸಲು, ರೈತರಿಗೆ ಯೋಗ್ಯ ಬೆಲೆ, ಜೀವನ ಮಟ್ಟ ಸುಧಾರಣೆ, ರೈಲು-ವಿಮಾನಯಾನ ಮೇಲ್ದರ್ಜೆಯಂತಹ ಅನೇಕ ಯೋಜನೆಗಳನ್ನು ಜಿಲ್ಲೆಗಾಗಿ ಹಾಕಿಕೊಂಡಿರುವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಬಿಜೆಪಿ ಭ್ರಮೆಗಳಿಂದ ನಾವು ಹೊರಗೆ ಬರಬೇಕು. ಮೋದಿಯವರು ಹೇಳಿರುವ ಯಾವ ಭರವಸೆಯೂ ಈಡೇರಿಲ್ಲ. ಬಂಗಾರದ ರಸ್ತೆ, ಅಕೌಂಟಿಗೆ ಹದಿನೈದು ಲಕ್ಷ ರೂ. ಹಾಗೇ ಉಳಿದಿವೆ. ಮೋದಿಯವರ ಸುಳ್ಳು ಬಟಾಬಯಲಾಗಿದೆ. ಕಾಂಗ್ರೆಸ್ನಿಂದ ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದೆ ಇಲ್ಲಿ ಆಲಗೂರರು ಸಂಸದರಾದರೆ ಈ ಕ್ಷೇತ್ರದ ಸಂಪೂರ್ಣ ಬದಲಾವಣೆ ಸಾಧ್ಯ ಎಂದರು.
ಅದಿ ಬಣಜಿಗ ಸಮಾಜದ ಮುಖಂಡರಾದ ಶ್ರೀಶೈಲಗೌಡ ಪಾಟೀಲ, ವಿಠ್ಠಲ ಕೊಳ್ಳೂರ, ಬಾಬುಗೌಡ ಪಾಟೀಲ ಚಡಚಣ, ಎಸ್ಬಿ.ಬಿರಾದಾರ, ಗಂಗಾಧರ ಸಂಬಣ್ಣಿ, ಹನುಮುಗೌಡ ಬಿರಾದಾರ, ಪಾಲಿಕೆ ಸದಸ್ಯ ಅಪ್ಪು ಪೂಜಾರಿ, ಅಶೋಕ ಚಾಂದೋಡಿ, ಶಿವರಾಜ ಸಾಹುಕಾರ ಭೈರಗೊಂಡ, ಸೋಮಲಿಂಗ ಕಟಾವಿ, ಮಾಧು ರಾಯಗೌಡ ಬಿರಾದಾರ, ಡಾ.ಪ್ರಕಾಶ ಗುಡದಾಳ, ರಮೇಶ ಬರಗೊಂಡಿ, ರವಿಗೌಡ ಪಾಟೀಲ, ಅಮೃತ ಭೈರಗೊಂಡ, ಹಣಮಂತ ಉಮರಾಣಿ, ಲಿಂಗಪ್ಪ ಮಮದಾಪುರ, ಬಸವರಾಜ ಚೌಡಾಪೂರ ಸೇರಿದಂತೆ ಜಿಲ್ಲೆಯ ಪ್ರಮುಖರು ಸಭೆಯಲ್ಲಿ ಇದ್ದರು.