ಬೆಳ್ತಂಗಡಿ : ಪ್ರಮುಖ ದೈವ ಕ್ಷೇತ್ರಗಳಾದ ಮುಗೇರಡ್ಕ, ಪಾಣೆಕಲ್ಲು ಮತ್ತು ಇನ್ನಿತರ ಗ್ರಾಮಗಳಲ್ಲಿ ಪ್ರಮುಖ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ ಬಂದಾರು ಕೆಲೆಂಜಿಮಾರು ನಿವಾಸಿ ಉಗ್ಗಪ್ಪ ಪರವ(ಕರಿಯ) (೭೪) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.
ಇವರ ನಿಧನಕ್ಕೆ ಶಾಸಕ ಹರೀಶ್ ಪೂಂಜಾ, ಮುಗೇರಡ್ಕ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಗೌಡ ಅಂತರ, ಮಾಜಿ ಶಾಸಕ ಕೆ. ವಸಂತ ಬಂಗೇರ ಸೇರಿದಂತೆ ಅನೇಕ ಗಣ್ಯರು ಸಂತಾಪ ಸಲ್ಲಿಸಿದ್ದಾರೆ. ಮೃತರು ಪತ್ನಿ, ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ.