ನಾಗಮಂಗಲ : ರೈತರೊಬ್ಬರು ತಮ್ಮ ಜಮೀನಿನಲ್ಲಿ ಅಳವಡಿಸಿದ್ದ ಮೂರು ಕೊಳವೆ ಬಾವಿಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ತಾಲೂಕಿನ ದೇವಲಾಪುರ ಹೋಬಳಿಯ ತಿಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವಲಾಪುರ ಹೋಬಳಿಯ ತಿಬ್ಬನಹಳ್ಳಿ ಗ್ರಾಮದ ರೇಣುಕಮ್ಮ ಸಿದ್ದಪ್ಪಾಜಿ ಎಂಬವರಿಗೆ ತಿಬ್ಬನಹಳ್ಳಿ ದಾಖಲೆ ಅರಸೇ ಗೌಡನ ಕೊಪ್ಪಲು ಗ್ರಾಮದಲ್ಲಿ ಜಮೀನು ಹೊಂದಿದ್ದು ಇಲ್ಲಿ ಮೂರು ಕೊಳವೆಬಾವಿಯನ್ನು ಕೊರೆಯಿಸಿದ್ದರು.
ಭಾನುವಾರ ರಾತ್ರಿ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಮೋಟಾರ್ ಸಮೇತ ಧ್ವಂಸ ಮಾಡಿ ಎರಡು ಕೊಳವೆ ಬಾವಿಗಳಿಗೆ ಕಲ್ಲು ತುಂಬಿ ಅಟ್ಟಹಾಸ ಮೆರೆದಿದ್ದಾರೆ.
ರೇಣುಕಮ್ಮ ಅವರು ತಾಲೂಕು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.