ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಕಾಂತಾವರ ರಥಬೀದಿಯ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ ದಲ್ಲಿ ನಡೆದ “ನಾಡಿಗೆ ನಮಸ್ಕಾರ “ಗ್ರಂಥಮಾಲೆಯ 13 ಕೃತಿಗಳ ಅನಾವರಣ ಸಮಾರಂಭದಲ್ಲಿ ಉಜಿರೆಯ ನಿವೃತ್ತ ಪ್ರಬಂಧಕ , ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿಯವರ ಐದನೇ ಕೃತಿ “ಧರ್ಮಭೂಷಣ-ಸಮಾಜಸೇವಕ :ಯು .ವಿಜಯರಾಘವ ಪಡುವೆಟ್ನಾಯ “(ಗ್ರಂಥಮಾಲೆಯ 320 ನೇ ಕೃತಿ ) ಬಿಡುಗಡೆ ಸಮಾರಂಭದಲ್ಲಿ ಗಣ್ಯ ಅತಿಥಿಗಳು ಕೃತಿಕಾರರನ್ನು ಗೌರವಿಸಿ ಪುರಸ್ಕರಿಸಿದರು.
ಕೃತಿ ಲೋಕಾರ್ಪಣೆಗೊಳಿಸಿದ ಪ್ರೊ ! ಭಾಸ್ಕರ ರೈ ಕುಕ್ಕುವಳ್ಳಿ ,ಉದ್ಘಾಟಕ ಶಶಿಧರ ಹಾಲಾಡಿ ,ಅಧ್ಯಕ್ಷತೆ ವಹಿಸಿದ್ದ ಡಾ!ಪುಂಡಿಕಾಯಿ ಗಣಪಯ್ಯ ಭಟ್ ,ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ! ನಾ .ಮೊಗಸಾಲೆ ,ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಮತ್ತು ಸಂಚಾಲಕ ವಿಠಲ ಬೇಲಾಡಿ ಮೊದಲಾದವರು ಉಪಸ್ಥಿತರಿದ್ದರು.