News Karnataka Kannada
Saturday, May 04 2024
ಮಂಗಳೂರು

ಧ್ವನಿವರ್ಧಕ ಬಳಕೆ ನಿರ್ಭಂದ ಬಗ್ಗೆ ಪಾರ್ಥನಾ ಮಂದಿರಗಳ ಪದಾಧಿಕಾರಿಗಳ ಜೊತೆ ಮಾಹಿತಿ ಸಭೆ

Bltngdy
Photo Credit :

ಬೆಳ್ತಂಗಡಿ: ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಜಾರಿ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 22 ಗ್ರಾಮಗಳ ಸರ್ವಧರ್ಮೀಯರ ಪ್ರಾರ್ಥನಾ ಮಂದಿರಗಳ ಮುಖ್ಯಸ್ಥರ ಸಭೆಯು ಮೇ.23 ರಂದು ಬೆಳ್ತಂಗಡಿ ಠಾಣೆಯಲ್ಲಿ ನಡೆಯಿತು.‌

ಸಭೆಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಬಿ ವಹಿಸಿದ್ದರು. ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಎಮ್.ಎಮ್, ತನಿಖೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ, ಪ್ರೊಬೆಷರಿ ಎಸ್.ಐ ಮುರಳೀಧರ ನಾಯ್ಕ್ ಪೂರಕ ಮಾಹಿತಿ ನೀಡಿದರು.

ಕಾನೂನಿಂತೆ ತಾಲೂಕಿನಲ್ಲಿ ಧ್ವನಿವರ್ಧಕ ಬಳಕೆ ಮಾಡುವ ಯಾವುದೇ ಪ್ರಾರ್ಥನಾ ಮಂದಿರ ಮತ್ತು ಸಂಸ್ಥೆಗಳು ಶಾಶ್ವತ ಬಳಕೆಗೆ ಡಿ.ವೈ.ಎಸ್‌.ಪಿ. ಅವರಿಂದ ಅನುಮತಿ ಪಡೆಯಬೇಕಿದೆ. ಯಾವುದೇ ಕಾರಣಕ್ಕೂ ರಾತ್ರಿ 10.00 ರಿಂದ ಬೆಳಿಗ್ಗೆ 6.00 ರ‌ವರೆಗೆ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ.

ಈ ಗಿನ ಕಾಯ್ದೆಯಂತೆ ಇದು ಕಡ್ಡಾಯವಾಗಿದ್ದು, ಮುಂದಿನ ತಿದ್ದುಪಡಿಗಳು ಬರುವಲ್ಲಿವರೆಗೆ ಇದನ್ನು ಪಾಲಿಸಬೇಕಿದೆ.
ವಿಶೇಷ ಕಾರ್ಯಕ್ರಮವಿದ್ದಲ್ಲಿ ಈ‌ ಹಿಂದಿನಂತೆಯೇ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಂದ ಲಿಖಿತ ಮನವಿ ಸಲ್ಲಿಸಿ ನಿಯಮಾನುಸಾರ ಅನುಮತಿ ಪಡೆಯಬಹುದು ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ‌ ನೀಡಲಾಯಿತು. ಸಭೆಯಲ್ಲಿದ್ದ ಪದಾಧಿಕಾರಿಗಳು ಸಂದೇಹಗಳ ಬಗ್ಗೆ ಪ್ರಶ್ನೆ ಕೇಳಿದರು.

ಸಭೆಯಲ್ಲಿ ಮಸೀದಿ,‌ ಚರ್ಚ್, ದೇವಸ್ಥಾನ,‌ ಭಜನಾ ಮಂದಿರದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯೇಕ ಠಾಣೆಗಳಲ್ಲಿ ಸಭೆ;
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.23 ರಂದು ಬೆಳಿಗ್ಗೆ, ವೇಣೂರು ಮತ್ತು ಉಪ್ಪಿನಂಗಡಿ ಠಾಣೆಯಲ್ಲಿ ಮೇ.22 ರಂದು ಸಂಜೆ ಆಯಾಯಾ ವ್ಯಾಪ್ತಿಯ ಗ್ರಾಮಗಳ ಮುಖ್ಯಸ್ಥರುಗಳ ಪ್ರತ್ಯೇಕ ಸಭೆಗಳು ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು