News Karnataka Kannada
Sunday, April 28 2024
ಮಂಗಳೂರು

ಪೆರ್ಲ-ಮುಂಡತ್ತೋಡಿ ರಸ್ತೆಯಲ್ಲಿ ವಾಹನ, ಜನಸಂಚಾರಕ್ಕೆ ತೀವ್ರ ಅಡಚಣೆ

Ujire
Photo Credit :

ಬೆಳ್ತಂಗಡಿ: ಉಜಿರೆಯ ಪೆರ್ಲ-ಮುಂಡತ್ತೋಡಿ ರಸ್ತೆ ಹೊಂಡ , ಗುಂಡಿಗಳಿಂದ ತುಂಬಿದ್ದು ವಾಹನ, ಜನಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದುಸಾರ್ವಜನಿಕರು ಶಾಸಕರು, ಗ್ರಾಮ ಪಂಚಾಯತ್ ಗೆ ಅನೇಕ ಬಾರಿ ಮನವಿ ನೀಡಿದ್ದರೂ ಯಾವುದೇ ದುರುಸ್ತಿಯಾಗದಿರುವುದರಿಂದ ಅನಿವಾರ್ಯವಾಗಿ ಗ್ರಾಮಸ್ಥರು ಮೇ 23ರ ಬೆಳಿಗ್ಗೆ 9.30 ಕ್ಕೆ ಕಾಲೇಜು ರಸ್ತೆ ಮುಂಭಾಗದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ಸುಮಾರು 200 ರಷ್ಟು ನಾಗರಿಕರು ಶಾಸಕರು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ರಸ್ತೆ ಡಾಮರೀಕರಣಕ್ಕೆ ಸರಕಾರದ ಅನುದಾನ ಮಂಜೂರಾಗಿದ್ದರೂ ಯಾವುದೇ ಕಾಮಗಾರಿ ನಡೆಯದೆ ರಸ್ತೆಯಲ್ಲಿ ವಾಹನ ನಡೆಸುವುದೇ ಅಸಾಧ್ಯವಾಗುತ್ತಿದೆಯೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು .

ಉಜಿರೆ ಗ್ರಾಮ ಪಂಚಾಯತ್ ಪರವಾಗಿ ಸ್ಥಳಕ್ಕಾಗಮಿಸಿದ ಉಪಾಧ್ಯಕ್ಷ ರವಿಕುಮಾರ್ ಬರಮೇಲು ಅವರು ಸದ್ರಿ ರಸ್ತೆ ಡಾಮರೀಕರಣ ಹಾಗು ಭಾಗಶಃ ಕಾಂಕ್ರೀಟೀಕರಣಕ್ಕೆ ಶಾಸಕರ ನೇತೃತ್ವದಲ್ಲಿ ರೂ 2.50 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಕಾಮಗಾರಿ ಬೇಗನೆ ಪ್ರಾರಂಭಗೊಳ್ಳಲಿದೆ ಎಂದು ಸಮಾಧಾನ ಪಡಿಸಿದರೂ ನಾಗರಿಕರು ಪಟ್ಟು ಹಿಡಿದು ಈಗಿಂದೀಗಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಪಂಚಾಯತ್ ಸದಸ್ಯೆ ಉಷಾಕಿರಣ ಕಾರಂತ್ ಅವರು ಉಪಸ್ಥಿತರಿದ್ದು ಸದ್ಯಕ್ಕೆ ತುರ್ತಾಗಿ ಪಂಚಾಯತ್ ವತಿಯಿಂದ ಗುಂಡಿ ಮುಚ್ಚುವ ಕಾರ್ಯ ಮಾಡಬಹುದು.ಮುಂದೆ ಡಾಮರೀಕರಣಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು. ಭಾಗದ ಪಂಚಾಯತ್ ಸದಸ್ಯರೂ ಉಪಸ್ಥಿತರಿದ್ದು ತಾಂತ್ರಿಕ ತೊಡಕಿನಿಂದ ಡಾಮರೀಕರಣದಲ್ಲಿ ವಿಳಂಬವಾಗಿದ್ದು ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಗ್ರಾಮಸ್ಥರು ಹಾಗು ಪಂಚಾಯತ್ ಸದಸ್ಯರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತ್ತು .ಪೊಲೀಸ್ ಸಿಬ್ಬಂದಿಗಳು ಶಾಂತಿ ಸುವ್ಯವಸ್ಥೆ ನೋಡಿಕೊಂಡರು. ಶಾಸಕರ ಮೂಲಕ ಶೀಘ್ರ ರಸ್ತೆ ದುರುಸ್ತಿಪಡಿಸುವ ಗ್ರಾ.ಪಂ. ಸದಸ್ಯರ ಭರವಸೆ ಹಿನ್ನೆಲೆಯಲ್ಲಿ 11 ಗಂಟೆ ಸುಮಾರಿಗೆ ನಾಗರಿಕರು ರಸ್ತೆ ತಡೆಯನ್ನು ಕೊನೆಗೊಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು