News Karnataka Kannada
Monday, April 29 2024
ಮಂಗಳೂರು

ಸೃಜನಶೀಲ ಚಿಂತನೆ, ಕ್ರಿಯಾಶೀಲತೆಗೆ ಅವಕಾಶಗಳು ಧರ್ಮಸ್ಥಳದಲ್ಲಿ ದೊರಕಿವೆ; ಶ್ರದ್ಧಾ ಅಮಿತ್

Womens Day
Photo Credit : News Kannada

ಬೆಳ್ತಂಗಡಿ : ಅಮ್ಮನಿಗೆ ಬಾಲ್ಯದಿಂದಲೇ ಓದುವ, ಬರೆಯುವ ಹವ್ಯಾಸವಿತ್ತು. ಸಭೆ-ಸಮಾರಂಭಗಳಿಗೆ ಹೋದಾಗ, ಪ್ರವಾಸಕ್ಕೆ ಹೋದಾಗ ಅವರು ನೋಡಿದ, ಕೇಳಿದ ವಿಚಾರಗಳನ್ನು ಕಲೆ ಹಾಕಿ ಸಾಕಷ್ಟು ಚಿಂತನ-ಮಥನ ಮಾಡುತ್ತಿದ್ದರು. ಧರ್ಮಸ್ಥಳದಲ್ಲಿ ಅವರ ಸೃಜನಶೀಲ ಚಿಂತನೆ ಹಾಗೂ ಕ್ರಿಯಾಶೀಲತೆಗೆ ಬೇಕಾದಷ್ಟು ವೇದಿಕೆ ಹಾಗೂ ಅವಕಾಶಗಳು ದೊರಕಿವೆ ಎಂದು ಶ್ರದ್ಧಾ ಅಮಿತ್ ಹೇಳಿದರು.

ಧರ್ಮಸ್ಥಳದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆಯೋಜಿಸಿದ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳದ ಸಿಬ್ಬಂದಿಗೆ ಅವರು ನಾಟಕ, ಯಕ್ಷಗಾನ, ಪುರಾಣವಾಚನ ಇತ್ಯಾದಿ ಧಾರ್ಮಿಕ ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯಲ್ಲಿ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿರುವುದರಿಂದ ಅನೇಕ ಉದಯೋನ್ಮುಖ ಕಲಾವಿದರು ಮೂಡಿ ಬಂದಿದ್ದಾರೆ. “ಗೆಳತಿ” ಮತ್ತು “ಮಗಳಿಗೊಂದು ಪತ್ರ” ಕೃತಿಗಳಲ್ಲಿ ಅವರ ಲೇಖನಗಳ ಸಂಗ್ರಹವಿದ್ದು ಸಾರ್ಥಕ ಬದುಕಿಗೆ ಮಾಹಿತಿ, ಮಾರ್ಗದರ್ಶನದ ಕಣಜವಾಗಿದೆ ಎಂದು ಹೇಳಿದರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶುಭದಾಸ್ ಮರವಂತೆ ಮಾತನಾಡಿ, ಹೇಮಾವತಿ ಹೆಗ್ಗಡೆಯವರ ಲೇಖನಗಳಲ್ಲಿ ಉತ್ಕ್ರುಷ್ಟ ವಿಚಾರಗಳ ಧೀಮಂತಿಕೆ ಮತ್ತು ಶ್ರೀಮಂತಿಕೆ ಇದ್ದು ಓದುಗರಲ್ಲಿ ಅರಿವಿನ ಬೆಳಕಿನೊಂದಿಗೆ ಆತ್ಮವಿಶ್ವಾಸ ಮತ್ತು ನವಚೈತನ್ಯವನ್ನು ಮೂಡಿಸುತ್ತವೆ ಎಂದು ಹೇಳಿದರು.

ಹೆಗ್ಗಡೆಯವರ ಮಾತೃಶ್ರೀ ರತ್ನಮ್ಮನವರು, ಹೇಮಾವತಿ ಹೆಗ್ಗಡೆಯವರು ಹಾಗೂ ಮಗಳು, ಶ್ರದ್ಧಾ ಅಮಿತ್ ಅವರ ಸಾಹಿತ್ಯ, ಸೇವೆ, ಸಾಧನೆ ಬಗ್ಯೆ ಅವರು ಅಭಿನಂದಿಸಿದರು. ಬೆಂಗಳೂರಿನ ಭಾರತೀಯ ಜೀವ ವಿಮಾ ನಿಗಮದ ಹಿರಿಯ ಅಧಿಕಾರಿ ರಾಜ್ಯಶ್ರೀ ಹಂಪನಾ ಮಾತನಾಡಿ, ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಕ್ರಾಂತಿಕಾರಿ ಪರಿವರ್ತನೆಯಾಗಿದೆ. ಸ್ವಚ್ಛತೆ, ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ-ಪೋಷಣೆ, ಉಳಿತಾಯ, ಸಭೆ-ಸಮಾರಂಭ ಆಯೋಜನೆ ಮೊದಲಾದ ಚಟುವಟಿಕೆಗಳಲ್ಲಿ ಮಹಿಳೆಯರು ಉನ್ನತ ಸಾಧನೆ ಮಾಡಿ ಎಲ್ಲಾ ರಂಗಗಳಲ್ಲಿಯೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಚಪ್ಪಲಿ ಇಡುವುದರಿಂದ ಚಪ್ಪಾಳೆ ತಟ್ಟುವ ವರೆಗೂ ಮಹಿಳೆಯರು “ಸೈ” ಎನಿಸಿಕೊಂಡಿದ್ದಾರೆ ಎಂದು ಹೇಳಿ ಅಭಿನಂದಿಸಿದರು.

ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯೆ ಭವಾನಿ ರಾವ್ ನೃತ್ಯ ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳ ಆಯೋಜನೆಯಲ್ಲಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನವನ್ನು ಧನ್ಯತೆಯಿಂದ ಸ್ಮರಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಸಂಗೀತಾ ಸ್ವಾಗತಿಸಿದರು. ಯೋಜನಾಧಿಕಾರಿ ಚೇತನಾ ಧನ್ಯವಾದವಿತ್ತರು. ಮಮತಾ ಹರೀಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು