ಕಾರಸಗೋಡು: ಎಣ್ಮಕಜೆ ಗ್ರಾಮದ ಭಾರತಿ ಹಾಗು ಚಿತ್ತರಂಜನ್ ದಂಪತಿಯು ತಮ್ಮ ಮಗುವಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.
ಎಣ್ಮಕಜೆ ಗ್ರಾಮದ ಭಾರತಿ ಹಾಗು ಚಿತ್ತರಂಜನ್ ದಂಪತಿಯ ಈ ಗಂಡು ಮಗು ಜನಿಸಿ ಇಂದಿಗೆ 15 ದಿನಗಳಾಗಿದೆ, ದುರದೃಷ್ಟವಶಾತ್ ಮಗುವಿಗೆ ಕರುಲಿನ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದೆ. ಹೀಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್ 16 ರಂದು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಮಗುವಿನ ಖಾಯಿಲೆಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ. ಮಗುವಿನ ಶಸ್ತ್ರಚಿಕಿತ್ಸೆಗೆ ಮತ್ತು ಇನ್ನಿತರೆ ಚಿಕಿತ್ಸೆಗೆ ಲಕ್ಷಕ್ಕಿಂತಲೂ ಹೆಚ್ಚಿನ ಹಣ ಬೇಕಾಗಿದೆ. ಭಾರೀ ಮೊತ್ತದ ಹಣವನ್ನು ಭರಿಸಲು ಮಗುವಿನ ಪೋಷಕರು ಸಾಧ್ಯವಾಗದೇ ಕಂಗಾಲಾಗಿ ಸಹೃದಯಿ ದಾನಿಗಳಾದ ತಮ್ಮಿಂದ ಧನ ಸಹಾಯಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯವಿಟ್ಟು ಸಹೃದಯಿ ದಾನಿಗಳು ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಅಥವಾ ಫೋನ್ ಪೇ / ಗೂಗಲ್ ಪೇ ಮಾಡುವ ಮೂಲಕ ಪುಟ್ಟ ಮಗುವಿನ ಜೀವ ಉಳಿಸುವಲ್ಲಿ ಹೃದಯವೈಶಾಲಯತೆಯನ್ನು ತೋರಬೇಕಾಗಿ ಮಗುವಿನ ಹೆತ್ತವರು ಮನವಿ ಮಾಡಿಕೊಂಡಿದ್ದಾರೆ.
PRAVEENKUMAR B
+91 81380 06627
A/C NUMBER: 520101045651856
IFSC Code: UBIN0930415