News Karnataka Kannada
Sunday, April 28 2024
ಕರಾವಳಿ

ಎಪಿಎಂಸಿ ರೈಲ್ವೇ ಕ್ರಾಸಿಂಗ್ ಸಮಸ್ಯೆಗೆ ಶೀರ್ಘ ಪರಿಹಾರ ಸಾಧ್ಯತೆ

Photo Credit :

ಎಪಿಎಂಸಿ ರೈಲ್ವೇ ಕ್ರಾಸಿಂಗ್ ಸಮಸ್ಯೆಗೆ ಶೀರ್ಘ ಪರಿಹಾರ ಸಾಧ್ಯತೆ

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಬರುವ ರೈಲ್ವೇ ಕ್ರಾಸಿಂಗ್ ಸಮಸ್ಯೆಗೆ ಪರಿಹಾರವಾಗಿ ಮೇಲ್ಸೇತುವೆ ಯಾ ಅಂಡರ್ ಪಾಸ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಮೈಸೂರು ರೈಲ್ವೇಯ ರೈಲ್ವೇ ಕನ್‍ಸ್ಟ್ರಕ್ಷನ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ನವಾಹತ್ ಸಿಂಗ್ ಅವರು ಜೂ.4ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಯಸಾಧನ ವರದಿ ಸಲ್ಲಿಕೆ
ಎಪಿಎಂಸಿ ರೈಲ್ವೇ ಕ್ರಾಸಿಂಗ್ ತಪ್ಪಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆ ಇದೆ. ಸಮಸ್ಯೆಯ ಕುರಿತು ವರದಿಗೆ ಸಂಬಂಧಿಸಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ಅಂದಾಜು ವೆಚ್ಚ ಪಟ್ಟಿ ತಯಾರು ಮಾಡಬೇಕು. ಅದಕ್ಕೂ ಮುಂದೆ ಸರ್ವೇ ಕಾರ್ಯ ನಡೆಸಬೇಕಾಗಿದೆ. ಅದಕ್ಕೂ ಮೊದಲು ಕಾರ್ಯಸಾಧನ ವರದಿಗಾಗಿ ನಾನು ಪರಿಶೀಲನೆ ನಡೆಸಲು ಆಗಮಿಸಿದ್ದೇನೆ. ಕಾರ್ಯಸಾಧನ ವರದಿಗೆ ಸಂಬಂಧಿಸಿ ಮುಂದೆ ಸರ್ವೆ ಕಾರ್ಯ ನಡೆಸಲಾಗುತ್ತದೆ ಎಂದು ಮಾದ್ಯಮದ ಜೊತೆ ಮಾತನಾಡಿದರು.

ಬಳಿಕ ಅವರು ರೈಲ್ವೇ ಗೇಟ್‍ನಿಂದ ರಸ್ತೆಯ ಅಂಚಿನಲ್ಲಿರುವ ತೋಡು ಮತ್ತು ಸಂಕವನ್ನು ಪರಿಶೀಲಿಸಿ, ಬಳಿಕ ರೈಲ್ವೇ ಜಾಗದಲ್ಲಿರುವ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಸಮೀಪದ ತನಕ ಸುತ್ತಾಡಿ ಪರಿಶೀಲಿಸಿದರು. ಕಾಮಗಾರಿ ಆರಂಭಿಸಿದರೆ ಬದಲಿ ರಸ್ತೆ ವ್ಯವಸ್ಥೆ ಕುರಿತು ನಗರಸಭೆ ಕಾರ್ಯಪಾಲಕ ಇಂಜಿನಿಯರ್ ಪ್ರಭಾರ ಪೌರಾಯುಕ್ತ ಅರುಣ್, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಮತ್ತು ಸ್ಥಳಿಯವಾಗಿದ್ದ ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಮುರ, ಮಾಜಿ ಪುರಸಭೆ ಸದಸ್ಯ ಉದಯ ಹೆಚ್, ರವೀಂದ್ರನ್, ಅನಿಲ್ ಕಾಮತ್, ಬಳಕೆದಾರರ ವೇದಿಕೆಯ ದಿನೇಶ್ ಭಟ್, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ದಾಮೋದರ್ ಭಂಡಾರ್‍ಕರ್, ಸಂದಿಪ್ ಲೋಬೊ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
185

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು