News Karnataka Kannada
Saturday, April 27 2024
ಕರಾವಳಿ

ಒಬ್ಬ ವ್ಯಕ್ತಿಯಿಂದ ದೇಶದ ಪ್ರಗತಿ ಸಾಧ್ಯವಿಲ್ಲ: ರಾಹುಲ್ ಗಾಂಧಿ

Photo Credit :

ಒಬ್ಬ ವ್ಯಕ್ತಿಯಿಂದ ದೇಶದ ಪ್ರಗತಿ ಸಾಧ್ಯವಿಲ್ಲ: ರಾಹುಲ್ ಗಾಂಧಿ

ಪಡುಬಿದ್ರಿ: ನರೇಂದ್ರ ಮೋದಿ ಅವರು ಹೋದಕಡೆಯೆಲ್ಲಾ 70 ವರ್ಷಗಳಿಂದ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತ್ತಾರೆ. ಇದು ದೇಶದ ಹಿರಿಯರು, ರೈತರು, ಬಡವರ ಶ್ರಮಕ್ಕೆ ಮಾಡಿದ ಅಪಮಾನ ಎಂದು ಪಡುಬಿದ್ರಿಯಲ್ಲಿ ಮಂಗಳವಾರ ಮಧ್ಯಾಹ್ನ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ಕೇವಲ ಒಬ್ಬ ವ್ಯಕ್ತಿಯಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ದೇಶದ ಪ್ರಗತಿಗೆ ನಿಮ್ಮ ತಂದೆ-ತಾಯಿ, ಬಡವರು, ಸಣ್ಣ ಉದ್ಯಮಿಗಳ ಅವಿರತ ಶ್ರಮವೇ ಕಾರಣ. ಆದರೆ ಮೋದಿ ಅವರು 70 ವರ್ಷಗಳಿಂದ ಯಾವುದೇ ಪ್ರಗತಿ ಆಗಿಲ್ಲವೆಂದು ಹೇಳುತ್ತಾ ಇರುವುದು ಇವರೆಲ್ಲರಿಗೂ ಮಾಡಿರುವ ಅವಮಾನವೆಂದು ರಾಹುಲ್ ಗಾಂಧಿ ತಿಳಿಸಿದರು.

ದೇಶದಲ್ಲಿ ಟೆಲಿಕಾಂ ಕ್ರಾಂತಿಯಾಗಲು ಕರ್ನಾಟಕದ ಯುವಜನರು ಕಾರಣ. ಕರ್ನಾಟಕದ ಯುವಜನರು ಟೆಲಿಕಾಂ ಕ್ರಾಂತಿಗೆ ಅವಿರತವಾಗಿ ದುಡಿದಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು